- Saturday 14 Dec 2019
ಶಿರೋಮಣಿ ಅಕಾಲಿದಳ ಮುಖಂಡನಿಗೆ ಗುಂಡಿಕ್ಕಿ ಹತ್ಯೆ: ಎರಡೂ ಕಾಲು ಕತ್ತರಿಸಿ ಸೇಡು ತೀರಿಸಿಕೊಂಡರು
Team Udayavani, Nov 19, 2019, 6:18 PM IST
ನವದೆಹಲಿ:ಶಿರೋಮಣಿ ಅಕಾಲಿ ದಳದ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಕಾಲುಗಳನ್ನು ಕತ್ತರಿಸಿ ಹಾಕಿರುವ ಬರ್ಬರ ಘಟನೆ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
51 ವರ್ಷದ ದಲ್ಬೀರ್ ಸಿಂಗ್ ಧಿಲ್ವಾನ್ ಹತ್ಯೆಯ ಹಿಂದೆ ರಾಜಕೀಯ ಇದೆ ಎಂಬ ಆರೋಪವನ್ನು ಬಾಟ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಓಪಿಂದರ್ ಜಿತ್ ಸಿಂಗ್ ಗುಮಾನ್ ತಳ್ಳಿಹಾಕಿದ್ದಾರೆ. ನೆರೆಮನೆಯವರ ಜತೆಗಿನ ವ್ಯಾಜ್ಯವೇ ಈ ಕೊಲೆಗೆ ಕಾರಣ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.
ದಲ್ಬೀರ್ ಗುರುದಾಸ್ ಪುರ್ ಶಾಖೆಯ ಶಿರೋಮಣಿ ಅಕಾಲಿ ದಳದ ಉಪಾಧ್ಯಕ್ಷರಾಗಿದ್ದರು. ಅಲ್ಲದೇ ಎರಡು ಬಾರಿ ಪಂಚಾಯತ್ ಅಧ್ಯಕ್ಷರಾಗಿದ್ದರು. ಈ ಘಟನೆ ಸೋಮವಾರ ಸಂಜೆ ಡೇರಾ ಬಾಬಾ ನಾನಕ್ ಪ್ರದೇಶದ ಧಿಲ್ವಾನ್ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೂಲಿಯೊಬ್ಬನನ್ನು ಗೊತ್ತುಪಡಿಸಿಕೊಳ್ಳುವ ವಿಚಾರದಲ್ಲಿ ದಲ್ಬೀರ್ ಸಿಂಗ್ ಮತ್ತು ನೆರೆ ಮನೆಯ ಬಲ್ವಿಂದರ್ ಸಿಂಗ್ ನಡುವೆ ಮಾತಿನ ಚಕಮಕಿ ಆರಂಭವಾಗಿತ್ತು. ಏತನ್ಮಧ್ಯೆ ಸ್ಥಳೀಯರ ಮಧ್ಯಪ್ರವೇಶದಿಂದ ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿದ್ದರು.
ಸೋಮವಾರ ಸಂಜೆ ದಲ್ಬೀರ್ ಸಿಂಗ್ ಮತ್ತು ಆತನ ಇಬ್ಬರ ಮಕ್ಕಳ ಜತೆ ಗ್ರಾಮದ ಹೊರಭಾಗದಲ್ಲಿ ತಿರುಗಾಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಲ್ವಿಂದರ್ ಸಿಂಗ್ ನ ಇಬ್ಬರು ಮಕ್ಕಳಾದ ಮಜೋರ್ ಸಿಂಗ್ (25ವರ್ಷ) ಮತ್ತು ಮನ್ ದೀಪ್ ಸಿಂಗ್ (24ವರ್ಷ) ದಾರಿಯಲ್ಲಿ ಅಡ್ಡಗಟ್ಟಿದ್ದರು. ನಂತರ ದಲ್ಬೀರ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಾದ ನಂತರ ಬಲ್ವಿಂದರ್ ಸಿಂಗ್, ದಲ್ಬೀರ್ ಸಿಂಗ್ ನ ಕಾಲುಗಳನ್ನು ಕತ್ತರಿಸಿಹಾಕಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ...
-
ಹೊಸದಿಲ್ಲಿ: ದೂರ ಸಂಪರ್ಕ ಇಲಾಖೆ ತನ್ನ 8526 ಮೆಗಾ ಹರ್ಟ್ಜ್ ಸಾಮರ್ಥ್ಯದ 5ಜಿ ತರಂಗಾಂತರದ ಇ ಹರಾಜಿಗೆ ಅರ್ಹ ಟೆಲಿಕಾಂ ಏಜೆನ್ಸಿಗಳಿಗೆ ಆಹ್ವಾನ ನೀಡಿದ್ದು, 4.98 ಲಕ್ಷ...
-
ಹೊಸದಿಲ್ಲಿ : 2025ರ ವೇಳೆಗೆ ಸುಮಾರು 9ಲಕ್ಷ ಮಹಿಳೆಯರು ಸ್ವಂತ ಉದ್ಯಮವನ್ನು ಹೊಂದಲಿದ್ದಾರೆ ಎಂದು ವರದಿಯೊಂದು ಹೇಳಿದ್ದು, ಆಹಾರದ್ಯೋಮ ಮತ್ತು ಶಿಕ್ಷಣ ಕ್ಷೇತ್ರ...
-
ಚೆನ್ನೈ: ಮದುವೆ ಅಂದರೆ ವಿಶಿಷ್ಟ ರೀತಿಯ ಉಡುಗೊರೆಗಳನ್ನು ಕೊಡುವವರಿದ್ದಾರೆ. ಆದರೆ ಈ ಮದುವೆಯಲ್ಲಿ ಮದುಮಕ್ಕಳಿಗೆ ಸಿಕ್ಕಿದ್ದೇ ಯಾರೂ ಊಹಿಸದ ಉಡುಗೊರೆ. ಒಂದು...
-
ನವದೆಹಲಿ/ಶ್ರೀನಗರ್: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಗೃಹ ಬಂಧನವನ್ನು ಮತ್ತೆ ಮೂರು ತಿಂಗಳ ಕಾಲ ಮುಂದುವರಿಸುವುದಾಗಿ ಸಬ್ ಜೈಲು ಅಧಿಕಾರಿಗಳು...
ಹೊಸ ಸೇರ್ಪಡೆ
-
ವಾಷಿಂಗ್ಟನ್: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಐತಿಹಾಸಿಕ ಹಾಗೂ ಸರಣಿ ಸುಧಾರಣಾ ಕ್ರಮಗಳು...
-
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ...
-
ಬೆಳ್ತಂಗಡಿ: ಕುವೆಟ್ಟು ಗ್ರಾಮದ ವರಕಬೆಯಲ್ಲಿ ಡಿ.14ರಂದು ರಿಕ್ಷಾ ಮಗುಚಿ, ಪ್ರಯಾಣಿಕ ಸೋನಂದೂರಿನ ಕೃಷ್ಣನಗರ ನಿವಾಸಿ ಹರೀಶ್ ಶೆಟ್ಟಿ (45) ಮೃತಪಟ್ಟಿದ್ದಾರೆ. ರಿಕ್ಷಾ...
-
ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ...
-
ಬೆಂಗಳೂರು: ನಗರದ 85 ಪ್ರದೇಶಗಳಲ್ಲಿ ಪಾರ್ಕಿಂಗ್ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಪ್ರಾರಂಭಿಸಿರುವ "ಸ್ಮಾರ್ಟ್ ಪಾರ್ಕಿಂಗ್'ಯೋಜನೆಯ ಪ್ರಾಯೋಗಿಕ...