ಮೋದಿ ಸರಕಾರಕ್ಕೆ 4 ವರ್ಷ: ಟ್ವಿಟರ್ನಲ್ಲಿ ಹರಿಹಾಯ್ದ ಅಖೀಲೇಶ್
Team Udayavani, May 26, 2018, 4:17 PM IST
ಲಕ್ನೋ : ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ನಾಲ್ಕು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್ ದಾಳಿ ನಡೆಸಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ದಲಿತರು, ಬಡವರು ಮತ್ತು ಮಹಿಳೆಯರು ಸಾಕಷ್ಟು ಬವಣೆ ಪಟ್ಟಿದ್ದಾರೆ ಎಂದವರು ದೂರಿದ್ದಾರೆ.
ಈ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ನಡೆಸುವುದಕ್ಕೆ ಮತ್ತು ಬ್ಯಾಂಕ್ ವಂಚಕರು ವಿದೇಶಕ್ಕೆ ಪಲಾಯನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅಖೀಲೇಶ್ ಹೇಳಿದ್ದಾರೆ.
ಮೋದಿ ಸರಕಾರದ ಜಿಎಸ್ಟಿ, ನೋಟು ಅಮಾನ್ಯ ಮುಂತಾದ ನಿರ್ಧಾರಗಳಿಂದ ರೈತರು, ವರ್ತಕರು, ನಿರುದ್ಯೋಗಿ ಯುವಕರು ಬಹುವಾಗಿ ಪರಿತಪಿಸುವಂತಾಗಿದೆ ಎಂದು ಅಖೀಲೇಶ್ ಹೇಳಿದ್ದಾರೆ.