ಭಾರತ್ ಕೆ ವೀರ್ ಮೂಲಕ 8 ಕೋಟಿ ರೂ. ಸಂಗ್ರಹ
Team Udayavani, Jun 30, 2017, 3:15 AM IST
ಹೊಸದಿಲ್ಲಿ: ನಕ್ಸಲರ ಜೊತೆ ಹೋರಾಡುತ್ತಾ ಪ್ರಾಣ ತೆತ್ತ ಅರೆಸೇನಾ ಪಡೆ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರವಾಗಿ ನೀಡಲು ದೇಶಾದ್ಯಂತ ಒಟ್ಟು 8 ಕೋಟಿ ರೂ. ಸಂಗ್ರಹವಾಗಿದ್ದು, ಅದನ್ನು ಗುರುವಾರ ಕೇಂದ್ರ ಗೃಹ ಸಚಿವಾಲಯದ ದತ್ತಿ ನಿಧಿಗೆ ಹಸ್ತಾಂತರಿಸಲಾಗಿದೆ. ‘ಭಾರತ್ ಕೆ ವೀರ್’ ಎಂಬ ಆ್ಯಪ್ ಮತ್ತು ವೆಬ್ಸೈಟ್ಗೆ ನಾಗರಿಕರು ಮತ್ತು ಸಂಸ್ಥೆಗಳು ನೀಡಿರುವ ದೇಣಿಗೆ ಇದು. ಈ ಆ್ಯಪ್ ಯೋಜನೆಯನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಆರಂಭಿಸಿದ್ದು, ಗೃಹ ಸಚಿವ ರಾಜನಾಥ್ ಸಿಂಗ್ ಅವರು ಏಪ್ರಿಲ್ನಲ್ಲಿ ಇದಕ್ಕೆ ಚಾಲನೆ ನೀಡಿದ್ದರು. ತದನಂತರ ದೇಶಾದ್ಯಂತದಿಂದ ಹಣ ಹರಿದುಬಂದಿದ್ದು, ಈವರೆಗೆ 7,93,90,858 ರೂ. ಸಂಗ್ರಹವಾಗಿದೆ.
ಶುಕ್ರವಾರ ವಿಡಿಯೋ ಸಂದೇಶ ನೀಡಿರುವ ರಾಜನಾಥ್, ಇನ್ನೂ ಹೆಚ್ಚಿನ ಸಹಾಯ ನೀಡುವಂತೆ ಕೇಳಿಕೊಂಡಿದ್ದಾರೆ. ‘ನೀವು ನೀಡುವ ಹಣದಿಂದ ಯೋಧರ ಕುಟುಂಬದವರಿಗೆ ಮಾತ್ರ ಅನುಕೂಲವಾಗುವುದಿಲ್ಲ. ಬದಲಿಗೆ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ಯೋಧರಿಗೆ ನೀಡಿದಂತಾಗುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ