ಅಲ್ ಬದ್ರ್ ಸಂಘಟನೆಯ ಉಗ್ರ ಮುಜಫರ್ ಅಹ್ಮದ್ ಎನ್ಕೌಂಟರ್ಗೆ ಬಲಿ
Team Udayavani, Jan 6, 2017, 12:05 PM IST
ಶ್ರೀನಗರ : ಭದ್ರತಾ ಪಡೆಗಳಿಗೆ ಸಿಕ್ಕಿರುವ ಭಾರೀ ದೊಡ್ಡ ಯಶಸ್ಸೊಂದರಲ್ಲಿ ಅಲ್ ಬದ್ರ್ ಸಂಘಟನೆಯ ಉಗ್ರ ಮುಜಫರ್ ಅಹ್ಮದ್, ಜಮ್ಮು ಕಾಶ್ಮೀರದ ಬಡಗಾಂವ್ ಜಿಲ್ಲೆಯಲ್ಲಿ ಇಂದು ಶುಕ್ರವಾರ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.
ಮುಜಫರ್ ಅಹ್ಮದ್ ಈ ಹಿಂದೆ ಪಾಕಿಸ್ಥಾನದಲ್ಲಿ ನೆಲೆ ಹೊಂದಿರುವ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ.
ಅಹ್ಮದ್ ಅಡಗಿಕೊಂಡಿದ್ದ ತಾಣದ ಬಗ್ಗೆ ನಿಖರ ಮಾಹಿತಿ ಪಡೆದ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಆ ಸ್ಥಳವನ್ನು ಸುತ್ತು ವರಿದು ಎನ್ಕೌಂಟರ್ ನಡೆಸಿದರು. ಇದನ್ನು ಅನುಸರಿಸಿ ಗುಂಡಿನ ಕಾಳಗ ನಡೆಯಿತು. ಎನ್ಕೌಂಟರ್ನಲ್ಲಿ ಅಹ್ಮದ್ ಹತನಾದ ಎಂದು ರಾಷ್ಟ್ರೀಯ ರೈಫಲ್ ಪಡೆಯ ಅನೂಪ್ ನಾಯರ್ ತಿಳಿಸಿದ್ದಾರೆ.
“ಅಹ್ಮದ್ನನ್ನು ಹತ್ಯೆ ಗೈಯುವ ಮೂಲಕ ನಾವು ಅಲ್ ಬದ್ರ್ ಉಗ್ರ ಸಂಘಟನೆಯ ಬೆನ್ನೆಲುಬನ್ನು ಮುರಿದಿದ್ದೇವೆ. ಈ ಉಗ್ರ ಸಂಘಟನೆಯು ಕಾಶ್ಮೀರದಲ್ಲಿ ನೆಲೆ ಕಾಣಲು ಕೆಲ ಕಾಲದಿಂದ ಯತ್ನಿಸುತ್ತಿತ್ತು’ ಎಂದು ನಾಯರ್ ಹೇಳಿದ್ದಾರೆ.
ಎಲ್ಇಟಿ ಸಂಘಟನೆಯ ಉಗ್ರನಾಗಿದ್ದ ಅಹ್ಮದ್ ನನ್ನು ಈಚೆಗೆ ಗುಂಪಿನಿಂದ ಹೊರಹಾಕಲಾಗಿತ್ತು. ಅನಂತರ ಆತ ಅಲ್ ಬದ್ರ್ ಸಂಘಟನೆಯನ್ನು ಸೇರಿಕೊಂಡಿದ್ದ. ಈತನು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಕಯೂಮ್ ನಜರ್ ನ ನಿಕಟ ಸಹವರ್ತಿಯಾಗಿದ್ದ ಎಂದು ನಾಯರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ