ಮಂಜು ಕವಿದು ಶೂನ್ಯ ಗೋಚರತೆ: 3 ಅಪಘಾತ, 2 ಸಾವು
Team Udayavani, Nov 8, 2017, 12:09 PM IST
ಆಲೀಗಢ, ಉತ್ತರ ಪ್ರದೇಶ : ದಟ್ಟನೆಯ ಮಂಜು ಕವಿದು ಶೂನ್ಯ ಗೋಚರತೆ ಉಂಟಾದ ಪ್ರಯುಕ್ತ ಆಲೀಗಢ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಡೆದ ಮೂರು ಪ್ರತ್ಯೇಕ ಅವಘಡಗಳಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ ಈ ಅವಘಡಗಳು 92ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬುಧವಾರ ನಸುಕಿನ ವೇಳೆ ನಡೆದಿವೆ.
ಕನಿಷ್ಠ ಇಬ್ಬರನ್ನು ಬಲಿ ಪಡೆದ ಈ ಅವಘಡಗಳಲ್ಲಿ ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.