ದಿಢೀರ್ ಶ್ರೀಮಂತರಿವರು: ಅರುಣಾಚಲ ಪ್ರದೇಶದ ಹಳ್ಳಿಯ ಕತೆಯಿದು
Team Udayavani, Feb 9, 2018, 8:15 AM IST
ಇಟಾನಗರ್: ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅರುಣಾಚಲದ ಬೊಮ್ಜಾ ಎಂಬ ಹಳ್ಳಿಯ ಕುಟುಂಬಗಳೆಲ್ಲಾ ಒಂದೇ ದಿನದಲ್ಲಿ ಕೋಟ್ಯಧಿಪತಿ ಕುಟುಂಬಗಳಾಗಿವೆ! ಪ್ರತಿಯೊಂದು ಕುಟುಂಬ 1 ಕೋಟಿ ರೂ.ಗಳಿಗೂ ಹೆಚ್ಚು ಹಣ ಪಡೆದಿದ್ದು ಈ ಹಳ್ಳಿ ಅನಧಿಕೃತವಾಗಿ ಏಷ್ಯಾದ ಅತಿ ಶ್ರೀಮಂತ ಹಳ್ಳಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಲ್ಲಿ ಹಣದ ಮಳೆ ಸುರಿಯಿತಾ ಅಂತ ಕೇಳಬೇಡಿ. 5 ವರ್ಷಗಳ ಹಿಂದೆ, ಸೇನೆ ಯೋಜನೆಗೆ ರೈತರಿಂದ ವಶಪಡಿಸಿಕೊಂಡಿದ್ದ 200 ಎಕರೆ ಭೂಮಿಗೆ ಒಟ್ಟು 40.8 ಕೋಟಿ ರೂ. ಪರಿಹಾರ ಹಣ ವಿತರಿಸಲಾಗಿದೆ. ಸಿಎಂ ಪೆಮಾ ಖಂಡು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ, ಹಳ್ಳಿಯ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಅದರಂತೆ, ಅತಿ ಹೆಚ್ಚು ಭೂಮಿ ನೀಡಿದ್ದ ಕುಟುಂಬ 6.73 ಕೋಟಿ ರೂ. ಪಡೆದಿದ್ದರೆ, ಮತ್ತೂಂದು ಕುಟುಂಬ 2.45 ಕೋಟಿ ರೂ. ಗಳಿಸಿದೆ. ಇತರ ಕುಟುಂಬಗಳು ತಲಾ 1.09 ಕೋಟಿ ರೂ. ಪಡೆದುಕೊಂಡಿವೆ.
ರೈತರಿಗೆ ಸಿಗಬೇಕಿದ್ದ ಪರಿಹಾರವನ್ನು ಕೊಡಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಗೆೆ ಧನ್ಯವಾದ. ರಾಜ್ಯದ ಇತರೆಡೆಯೂ ಆಗಿರುವ ಭೂಸ್ವಾಧೀನದ ಪರಿಹಾರದ ಮೊತ್ತ ಬೇಗನೇ ಸಿಗಲಿದೆ ಎಂದು ಸಿಎಂ ಪೆಮಾ ಖಂಡು ಹೇಳಿದ್ದಾರೆ.
200 ಎಕರೆ ಸ್ವಾಧೀನವಾಗಿದ್ದ ಒಟ್ಟು ಭೂಮಿ
40.8 ಕೋಟಿ ರೂ. ಹಂಚಿಕೆಯಾದ ಒಟ್ಟು ಪರಿಹಾರ
6.73 ಕೋಟಿ ರೂ. ಗರಿಷ್ಠ ಪರಿಹಾರ
1.06 ಕೋಟಿ ರೂ. ಕನಿಷ್ಠ ಪರಿಹಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!