ಸೇನೆಗೆ ಸಲಾಂ; ಮಿರಾಜ್ 2000 ಬಳಸಿದ್ದೇಕೆ, ಇದರ ತಾಕತ್ತು ಏನು ಗೊತ್ತಾ?


Team Udayavani, Feb 26, 2019, 10:04 AM IST

air-01.jpg

ನವದೆಹಲಿ: ಭಾರತೀಯ ವಾಯುಪಡೆ ಸೇನೆ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಅಡಗು ತಾಣ ಧ್ವಂಸಗೊಳಿಸಿದ ಕ್ರಮಕ್ಕೆ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಕೈಗೊಂಡ ಏರ್ ಸ್ಟ್ರೈಕ್ ಕಾರ್ಯಾಚರಣೆಗೆ ಐಎಎಫ್ ನ ಮಿರಾಜ್ 2000 ಯುದ್ಧ ವಿಮಾನ ಉಪಯೋಗಿಸಿದ್ದು ಯಾಕೆ? ಏನಿದರ ವಿಶೇಷತೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪಾಕ್ ಉಗ್ರರ ಮೇಲೆ ಮಿರಾಜ್ 2000 ಯುದ್ಧ ವಿಮಾನದ ಮೂಲಕ ದಾಳಿ ನಡೆಸಿದ ಪರಿಣಾಮ ಅಡಗುತಾಣ ಧ್ವಂಸವಾಗಿ ಹೋಗಿದ್ದವು. ಇದು ಮಿರಾಜ್ ಯುದ್ಧ ವಿಮಾನದ ತಾಕತ್ತು.

ಡಸಾಲ್ಟ್ ಏವಿಯೇಷನ್ ಬಹುಪಯೋಗಿ ಯುದ್ಧ ವಿಮಾನ ತಯಾರಿಕಾ ಕಂಪನಿಯಾಗಿದೆ. ಡಸಾಲ್ಟ್ ಏವಿಯೇಷನ್ ಫ್ರಾನ್ಸ್ ಮೂಲದ ಕಂಪನಿ. 1978ರಲ್ಲಿ ಮೊತ್ತ ಮೊದಲ ಯುದ್ಧ ವಿಮಾನಗಳನ್ನು ಇದು ಪರಿಚಯಿಸಿತ್ತು. 1984ರಲ್ಲಿ ಫ್ರಾನ್ಸ್ ವಾಯುಪಡೆ, ಯುಎಇ ವಾಯುಪಡೆ, ಚೀನಾ ವಾಯುಪಡೆ ಹಾಗೂ ಭಾರತದ ವಾಯುಪಡೆಗೆ ಮಿರಾಜ್ ಯುದ್ಧ ವಿಮಾನಗಳನ್ನು ಪೂರೈಸಿತ್ತು.

1982ರಲ್ಲಿ ಭಾರತ ಫ್ರಾನ್ಸ್ ಜತೆ ಮಾತುಕತೆ ನಡೆಸುವ ಮೂಲಕ ಎಂಟು ಮಿರಾಜ್ 2000 ಯುದ್ಧ ವಿಮಾನ ಖರೀದಿಸಿತ್ತು. ಆ ಬಳಿಕ ಐಎಎಫ್ ಮಿರಾಜ್ 2000 ವಜ್ರ ಎಂದು ಹೆಸರಿಟ್ಟಿತ್ತು(ಸಂಸ್ಕೃತದಲ್ಲಿ ಬೆಳಕು ಅಂತ ಅರ್ಥ, ಇಂಗ್ಲಿಷ್ ನಲ್ಲಿ ಥಂಡರ್ ಬೋಲ್ಟ್ ಎಂಬುದಾಗಿ)!

ಕಾರ್ಗಿಲ್ ಯುದ್ಧದಲ್ಲಿ ಬಳಕೆಯಾಗಿತ್ತು ಈ ಮಿರಾಜ್ 2000!

1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಮಿರಾಜ್ 2000 ಶತ್ರುಗಳ ಹೆಡೆಮುರಿ ಕಟ್ಟಿಹಾಕುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಹಿಮಾಲಯದ ತುತ್ತತುದಿಯಲ್ಲಿ ಮಿರಾಜ್ 2000 ಯುದ್ಧ ವಿಮಾನ ಕರಾರುವಕ್ಕು ದಾಳಿ ನಡೆಸಲು ವಾಯುಸೇನೆ ಯಶಸ್ವಿಯಾಗಿತ್ತು. ಮಿರಾಜ್ 2000 ಮೂಲಕ ಲೇಸರ್ ಗೈಡೆಡ್ ಬಾಂಬ್ ಗಳ ದಾಳಿ ನಡೆಸಲಾಗುತ್ತದೆ. ಇದು ಶತ್ರುಗಳ ಬಂಕರ್ ಅನ್ನು ನಾಶಪಡಿಸಲು ಮಿರಾಜ್ 2000 ಅನ್ನು ಉಪಯೋಗಿಸಲಾಗುತ್ತದೆ.

ಡಸಾಲ್ಟ್ ಏವಿಯೇಷನ್ ಕಂಪನಿ ಮಿರಾಜ್ 2000ಸಿ, ಮಿರಾಜ್ 2000ಬಿ, ಮಿರಾಜ್ 2000ಎನ್, ಮಿರಾಜ್ 2000ಡಿ, ಮಿರಾಜ್ 20005ಎಫ್, ಮಿರಾಜ್ 5ಮಾರ್ಕ್ 2, ಮಿರಾಜ್ 2000ಇ, ಮಿರಾಜ್ ಬಿಆರ್, ಮಿರಾಜ್ 9ಹೀಗೆ ವಿವಿಧ ಶ್ರೇಣಿಯ ಯುದ್ಧ ವಿಮಾನ ತಯಾರಿಸಿತ್ತು.

ಭಾರತದ ಬಳಿ ಇದೀಗ ಆಧುನಿಕ(ಅಪ್ ಗ್ರೇಡ್) ಮಿರಾಜ್ 2000ಎಚ್, ಮಿರಾಜ್ 2000ಟಿಐ ಸೇರಿದಂತೆ ಒಟ್ಟು 50 ಮಿರಾಜ್ ಯುದ್ಧ ವಿಮಾನಗಳಿವೆ.

ಮಿರಾಜ್ 2000 ಹೇಗಿರುತ್ತೆ?

ಮಿರಾಜ್ 2000 ಯುದ್ಧ ವಿಮಾನದಲ್ಲಿ ಒಬ್ಬರೇ ಒಬ್ಬರು ಕ್ರ್ಯೂ(ಪೈಲಟ್) ಇರುತ್ತಾರೆ. ಇದರ ಉದ್ದ 14.36 ಮೀಟರ್ (47 ಅಡಿ ಉದ್ದ). ರೆಕ್ಕೆಯ ಉದ್ದ 9.13 ಮೀಟರ್(29 ಅಡಿ ಅಗಲ), ಸುಮಾರು 5,20 ಮೀಟರ್ ಎತ್ತರ, ರೆಕ್ಕೆಯ ವಿಸ್ತಾರ 41 ಮೀಟರ್, ವಿಮಾನದ (ಖಾಲಿ) ತೂಕ 7,500 ಕೆಜಿ, ಲೋಡೆಡ್ ವಿಮಾನದ ತೂಕ 13, 800 ಕೆಜಿ.

ಈ ವಿಮಾನ ಗರಿಷ್ಠ 2,336 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. 1,550 ಕಿಲೋ ಮೀಟರ್ ದೂರದವರೆಗೆ ಬಾಂಬ್ ಹಾಕಬಲ್ಲ ಶಕ್ತಿ ಇದಕ್ಕಿದೆ. ಬರೋಬ್ಬರಿ 56 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ತಾಕತ್ತು ಮಿರಾಜ್ 2000 ಯುದ್ಧ ವಿಮಾನಕ್ಕಿದೆ.

ಮಿರಾಜ್ 2000 ವಿಮಾನದಲ್ಲಿ ಗನ್, 58ಮಿ.ಮೀಟರ್ ನ ರಾಕೆಟ್ ಗಳು, ವಾಯು ನೆಲೆಯಿಂದ ವಾಯುನೆಲೆಗೆ ಸಿಡಿಸಬಲ್ಲ ಮಿಸೈಲ್, ಆಕಾಶದಿಂದ ಭೂಮಿಗೆ ಸಿಡಿಸಬಲ್ಲ ಮಿಸೈಲ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿದೆ.

ಯಾವ ದೇಶದ ಬಳಿ ಎಷ್ಟು ಮಿರಾಜ್ ಯುದ್ಧ ವಿಮಾನಗಳಿವೆ ಗೊತ್ತಾ?

ಅಮೆರಿಕದ ಬಳಿ ಒಟ್ಟು 315 (2000ಸಿ 124, 20005ಎಫ್ 37, 2000ಡಿ 86, 2000ಎನ್ 75, 2000ಬಿ 30)

ಯುಎಇ ಬಳಿ ಒಟ್ಟು 67 (2000ಎಡಿ 22, 2000-9 19, 2000-9ಡಿ 12, 2000ಆರ್ ಎಡಿ 8, 2000ಡಿಎಡಿ 6)

ಚೀನಾ ಬಳಿ ಒಟ್ಟು 60 (2000 5ಇಐ 48, 20005ಡಿಐ 12)

ಗ್ರೀಸ್ ಬಳಿ ಒಟ್ಟು 44 (2000 ಇಜಿ 17, 2000 5ಎಂಕೆ 2 25, 2000ಬಿಜಿ 2)

ಈಜಿಪ್ಟ್ ಬಳಿ ಒಟ್ಟು 20( 2000ಇಎಂ 16, 2000 ಬಿಎಂ 4)

ಬ್ರೆಜಿಲ್ ಬಳಿ ಒಟ್ಟು 12 (2000ಸಿ 10, 2000 ಬಿ 2)

ಕತಾರ್ ಬಳಿ ಒಟ್ಟು 12 (20005ಇಡಿಎ 9,20005ಡಿಡಿಎ 3)

ಪೆರು ಬಳಿ ಒಟ್ಟು 12 (2000ಪಿ 10, 2000ಡಿಪಿ 2)

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.