Watch Video: ಹಗೆತನ ಸಾಧಿಸಿದ್ದಕ್ಕೆ ಕ್ಷಮಿಸಿ ಬಿಡಿ…ಅಮಿತಾಬ್ ಬಚ್ಚನ್ ಗೆ ಅಮರ್ ಸಿಂಗ್
“ಇಂದು ನನ್ನ ತಂದೆಯವರ ಪುಣ್ಯತಿಥಿ. ನಾನು ಅಮಿತಾಬ್ ಬಚ್ಚನ್ ಜೀ ಅವರ ಸಂದೇಶವನ್ನು ಸ್ವೀಕರಿಸಿದೆ.
Team Udayavani, Feb 19, 2020, 11:21 AM IST
ನವದೆಹಲಿ:ತನ್ನ ಹಗೆತನದ ನಡವಳಿಕೆ ಕುರಿತಂತೆ ಅನಾರೋಗ್ಯ ಪೀಡಿತ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಕುಟುಂಬದವರ ಕ್ಷಮೆಯಾಚಿಸಿದ್ದಾರೆ.
ತಮ್ಮ ತಂದೆಯವರ ಪುಣ್ಯತಿಥಿಯ ಸಂದೇಶವನ್ನು ಬಿಗ್ ಬಿ ಕಳುಹಿಸಿದ ನಂತರ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ತನ್ನ ಹಗೆತನದ ನಡವಳಿಕೆ ಬಗ್ಗೆ ಕ್ಷಮಿಸುವಂತೆ ಕೋರಿರುವ ವೀಡಿಯೋವನ್ನು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ಇಂದು ನನ್ನ ತಂದೆಯವರ ಪುಣ್ಯತಿಥಿ. ನಾನು ಅಮಿತಾಬ್ ಬಚ್ಚನ್ ಜೀ ಅವರ ಸಂದೇಶವನ್ನು ಸ್ವೀಕರಿಸಿದೆ. ನನಗೆ ಮತ್ತೆ ನಮ್ಮ ಹಳೆಯ ಗೆಳೆತನ ನೆನಪಿಸಿಕೊಳ್ಳುವಂತಾಗಿದೆ. ನಾನೀನ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದೇನೆ. ಈ ವೇಳೆ ನಾನು ಅಮಿತಾಬ್ ಜೀ ಮತ್ತು ಕುಟುಂಬದವರ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ” ಎಂದು ವೀಡಿಯೋದಲ್ಲಿ ಭಿನ್ನವಿಸಿಕೊಂಡಿದ್ದಾರೆ.
ಅಮರ್ ಸಿಂಗ್ ಒಂದು ಕಾಲದಲ್ಲಿ ಅಮಿತಾಬ್ ಬಚ್ಚನ್ ಕುಟುಂಬದ ಅತೀ ನಿಕಟವರ್ತಿಯಾಗಿದ್ದರು. ಆದರೆ ಬಿಗ್ ಬಿ ಪತ್ನಿ ಜಯಾ ಬಚ್ಚನ್ ವಿರುದ್ಧ ಕಟು ಶಬ್ದಗಳಿಂದ ನಿಂದಿಸಿದ ನಂತರ ಉಭಯ ಕುಟುಂಬಗಳ ನಡುವೆ ಮನಸ್ತಾಪದಿಂದ ದೂರಾಗಿ ಬಿಟ್ಟಿದ್ದರು.
“ಅವರು ನನಗಿಂದ ದೊಡ್ಡವರು. ನನಗೆ ಆ ಅಹಂಕಾರದ ಅಮಲು ಇಳಿದಿದೆ. ನನಗೀಗ ಮನವರಿಕೆಯಾಗಿದೆ…ನಾನು ಉಪಯೋಗಿಸಿದ ಶಬ್ದಕ್ಕೆ ಕ್ಷಮೆಯಾಚಿಸಬೇಕು ಎಂದು ನನ್ನ ಮನಸ್ಸಿಗೆ ಬಂದಿದೆ. ಬಚ್ಚನ್ ಕುಟುಂಬ ಯಾವತ್ತೂ ನನಗೆ ನಿರಾಸೆ ಮಾಡಿಲ್ಲ ಎಂದು ಅಮರ್ ಸಿಂಗ್ ವೀಡಿಯೊದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್