ಆಡಳಿತ ವಿರೋಧಿ ಅಲೆಯೇರಿ ದಡ ಹತ್ತಿದ ಅಮರಿಂದರ್‌!


Team Udayavani, Mar 12, 2017, 3:45 AM IST

amarendar-sing.jpg

-ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ಗೆ ಭಾರೀ ಜಯ
-ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋದ ಶಿರೋಮಣಿ-ಬಿಜೆಪಿ ಸರ್ಕಾರ
-ಸೋತರೂ ಕುಗ್ಗದ ಆಮ್‌ ಆದ್ಮಿ ಪಕ್ಷಕ್ಕೆ 2ನೇ ಸ್ಥಾನ, ಮೂಡಿದ ಭರವಸೆ

ಚಂಡೀಗಢ: ಪಂಜಾಬ್‌ನಲ್ಲಿ ಬೀಸಿದ ಆಡಳಿತ ವಿರೋಧಿ ಅಲೆಗೆ ಶಿರೋಮಣಿ ಅಕಾಲಿದಳ-ಬಿಜೆಪಿ ನೇತೃತ್ವದ ಸಮ್ಮಿಶ್ರ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊಚ್ಚಿಕೊಂಡು ಹೋಗಿದೆ. ಮತ್ತೂಂದು ಕಡೆ ಮೊದಲ ಬಾರಿ ಸ್ಪರ್ಧಿಸಿ ಅದೇ ಅವಕಾಶದಲ್ಲಿ ಪಂಜಾಬ್‌ ಗದ್ದುಗೆ ಹತ್ತುವ ತವಕದಲ್ಲಿದ್ದ ಆಮ್‌ ಆದ್ಮಿ ಪಕ್ಷ 2ನೇ ಸ್ಥಾನ ಗಳಿಸುವ ಮೂಲಕ ನಿರಾಶೆ ಅನುಭವಿಸಿದೆ. ಆದರೆ ಇವೆರಡರ ವೈಫ‌ಲ್ಯದ ಪೂರ್ಣ ಲಾಭ ಎತ್ತಿದ್ದು ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌. ಅದು 117 ಕ್ಷೇತ್ರಗಳ ಪೈಕಿ 77ನ್ನು ತನ್ನದಾಗಿಸಿಕೊಂಡು ಮೆರೆದಾಡಿದೆ. ಅಮರಿಂದರ್‌ 4ನೇ ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ಸರ್ವಸಿದ್ಧತೆ ನಡೆಸಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆಯಿತ್ತಾದರೂ ಈ ಮಟ್ಟದ ಗೆಲುವು ಅದಕ್ಕೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಶಿರೋಮಣಿ-ಬಿಜೆಪಿಯ ಹೀನಾಯ ಸೋಲಲ್ಲ, ಆಮ್‌ ಆದ್ಮಿ ಪಕ್ಷದ ನಿರೀಕ್ಷೆಗೂ ಕಡಿಮೆ ಸಾಧನೆ. ಈ ಬಾರಿ ಆಮ್‌ ಆದ್ಮಿ ಅಧಿಕಾರಕ್ಕೇರಿದರೂ ಅಚ್ಚರಿಯಿಲ್ಲ ಎಂಬ ವಾತಾವರಣವಿತ್ತು. ಅಲ್ಲಿನ ಆಡಳಿತ ವಿರೋಧಿ ಅಲೆ, ಮಾದಕ ದ್ರವ್ಯ ಸೇವನೆ ಹಾವಳಿ, ಕೃಷಿಕರ ಆತ್ಮಹತ್ಯೆ, ನಿರುದ್ಯೋಗದ ಉಗ್ರಸ್ವರೂಪ ಇವೆಲ್ಲವೂ ಸಮ್ಮಿಶ್ರ ಸರ್ಕಾರವನ್ನು ಆಪೋಶನ ತೆಗೆದುಕೊಳ್ಳುವುದು ಮೊದಲೇ ಖಚಿತವಾಗಿತ್ತು. ಇದರ ಪೂರ್ಣ ಲಾಭ ಎತ್ತಲು ಆಮ್‌ ಆದ್ಮಿ ಪಕ್ಷ ದೆಹಲಿ ಮಾದರಿಯಲ್ಲೇ ಸಜ್ಜಾಗಿತ್ತು. ಇದು ಅಧಿಕಾರ ಹಿಡಿಯುವ ತೀವ್ರ ಹಪಾಹಪಿಯಲ್ಲಿದ್ದ ಕಾಂಗ್ರೆಸ್‌ಗೆ ಆತಂಕ ಮೂಡಿಸಿತ್ತು. ಈ ಆತಂಕ ಅಗತ್ಯವಿಲ್ಲವೆಂದು ಫ‌ಲಿತಾಂಶ ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲೂ ಅದಕ್ಕೆ ಅತಂತ್ರ ಸ್ಥಿತಿ ಸ್ಥಿತಿ ಎದುರಿಸುವ ಭೀತಿಯಿಲ್ಲ. ಅಷ್ಟು ಶಾಸಕರ ಬಲ ಅದಕ್ಕೆ ಸಿಕ್ಕಿದೆ.
ಶಿರೋಮಣಿ-ಬಿಜೆಪಿ ನಿರ್ನಾಮ: ಆದರೆ ಹಾನಿ ಅನುಭವಿಸಿದ್ದು ಶಿರೋಮಣಿ-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ. ಸೋಲುವ ವಾಸನೆ ಅದಕ್ಕೆ ಬಡಿದಿದ್ದರೂ ಇಷ್ಟು ಹೀನಾಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದರ ಹಲವು ಸಚಿವರು ಸೇರಿ ಬಹುತೇಕ ಶಾಸಕರು ಸೋತು ಹೋಗಿದ್ದಾರೆ. ಇದು ಸ್ಪಷ್ಟಗೊಳ್ಳಬೇಕಿದ್ದರೆ 2012ರ ಚುನಾವಣೆ ಫ‌ಲಿತಾಂಶ ಪರಿಶೀಲಿಸಬೇಕು. ಆಗ ಶಿರೋಮಣಿ ಅಕಾಲಿದಳ 56 ಸ್ಥಾನ ಗೆದ್ದಿದ್ದರೆ, ಜೊತೆಗಾರ ಬಿಜೆಪಿ 12 ಗೆದ್ದಿತ್ತು. ಇಬ್ಬರೂ ಒಟ್ಟಾಗಿ 68 ಸ್ಥಾನ ಗೆದ್ದಿದ್ದವು. ಈ ಬಾರಿ ಪೂರ್ಣ ವಿರುದ್ಧ ಚಿತ್ರ. ಶಿರೋಮಣಿ ಗೆದ್ದಿದ್ದು ಕೇವಲ 15, ಬಿಜೆಪಿಗೆ ದಕ್ಕಿದ್ದು ಬರೀ 3. ಆಗ ಅಸ್ತಿತ್ವದಲ್ಲೇ ಇಲ್ಲದ ಆಪ್‌ ಗೆದ್ದಿರುವುದು 20!
ಭಾರೀ ಅಂತರದಿಂದ ಗೆದ್ದ ಕ್ಯಾಪ್ಟನ್‌: ಇಲ್ಲಿನ ಮತ್ತೂಂದು ಗಮನಿಸಬೇಕಾದ ಸಂಗತಿ ಕೈ ನಾಯಕ ಅಮರಿಂದರ್‌ ಸಿಂಗ್‌ 2 ಕಡೆ ಸ್ಪರ್ಧಿಸಿ 1 ಕಡೆ ಗೆದ್ದು, 1 ಕಡೆ ಸೋತರು. ತಮ್ಮ ಸ್ವಕ್ಷೇತ್ರ ಪಟಿಯಾಲದಲ್ಲಿ ಬೃಹತ್‌ ಅಂತರದಿಂದ (52,407) ವಿರೋಧಿಗಳನ್ನು ಹಣಿದರು. ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕಿದ ಸಮಾಧಾನವೆಂದರೆ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ಗೆದುರಾಗಿ ಲಂಬಿಯಲ್ಲಿ ಸ್ಪರ್ಧಿಸಿದ್ದ ಅಮರಿಂದರ್‌ ಅಲ್ಲಿ 22,770 ಮತಗಳಿಂದ ಸೋತಿದ್ದು. ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌ ಜಲಾಲಾಬಾದ್‌ನಲ್ಲಿ ಗೆದ್ದು ನಿಟ್ಟುಸಿರುಬಿಟ್ಟಿದ್ದು ಸಮ್ಮಿಶ್ರಸರ್ಕಾರದ ಮತ್ತೂಂದು ಸಾಧನೆ!
ಅಮರಿಂದರ್‌ ಕೊನೆ ಚುನಾವಣೆ?: ಚುನಾವಣೆ ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮರಿಂದರ್‌, ಮಾದಕ ದ್ರವ್ಯ ಹಾವಳಿಯನ್ನು ತಡೆಯುವುದು ತನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಇದೇ ಅಮರಿಂದರ್‌ಗೆ ಕೊನೆಯ ಚುನಾವಣೆಯಂತೆ. ಈಗಾಗಲೇ 75 ಮುಟ್ಟಿರುವ ಅಮರಿಂದರ್‌ ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಕುಟುಂಬ ಮೂಲಗಳು ತಿಳಿಸಿವೆ.
ದಲಿತರ ಓಲೈಕೆ: ಈ ಬಾರಿ ಮೂರೂ ಪಕ್ಷಗಳು ದಲಿತರ ಓಲೈಕೆ ಮಾಡಿದ್ದು ಸ್ಪಷ್ಟವಾಗಿತ್ತು. ಆಮ್‌ ಆದ್ಮಿ ಪಕ್ಷ ತಾನು ಗೆದ್ದರೆ ದಲಿತ ಶಾಸಕನನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿತ್ತು. ಬಿಜೆಪಿ ದಲಿತ ವ್ಯಕ್ತಿಯೊಬ್ಬರನ್ನು ತನ್ನ ರಾಜ್ಯಾಧ್ಯಕ್ಷನನ್ನಾಗಿ ಘೋಷಿಸಿತ್ತು. ಕಾಂಗ್ರೆಸ್‌ ಹಲವು ದಲಿತ ಕಲ್ಯಾಣ ಭರವಸೆ ನೀಡಿ ಓಲೈಕೆಯಲ್ಲಿ ಮುಂಚೂಣಿಯಲ್ಲಿತ್ತು.

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

1-eqwewq

Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್‌ ಆಡಲಿ: ಪೊವೆಲ್‌

IND VS PAK

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.