ಲಾಕ್ ಡೌನ್: ಉತ್ತರಪ್ರದೇಶ ಟು ಮಧ್ಯಪ್ರದೇಶ;ಕರ್ತವ್ಯಕ್ಕಾಗಿ 450 ಕಿ.ಮೀ ನಡೆದ ಕಾನ್ಸ್ ಟೇಬಲ್
ಕೈಕಾಲು ನೋಯುತ್ತಿದ್ದರೂ ಕೂಡಾ ಕರ್ತವ್ಯಕ್ಕೆ ಹಾಜರಾಗಲೇಬೇಕೆಂದು ಹಠ ತೊಟ್ಟು ಠಾಣೆ ತಲುಪಿರುವುದಾಗಿ ಪಿಟಿಐ ಜತೆ ಮಾತನಾಡುತ್ತಿ ತಿಳಿಸಿದ್ದಾರೆ.
Team Udayavani, Mar 30, 2020, 3:01 PM IST
ಲಕ್ನೋ: ಕರ್ತವ್ಯಕ್ಕೆ ಹಾಜರಾಗಬೇಕೆಂಬ ಹಿರಿಯ ಅಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಉತ್ತರಪ್ರದೇಶದಿಂದ 450 ಕಿಲೋ ಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ರಾಜ್ ಗಢ್ ಗೆ ಬಂದು ತಲುಪಿರುವ ಘಟನೆಯೊಂದು ವರದಿಯಾಗಿದೆ.
ಕೋವಿಡ್ 19 ಸೋಂಕು ಹರಡುವ ಭೀತಿಯಿಂದ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿತ್ತು. 22 ವರ್ಷದ ದಿಗ್ವಿಜಯ್ ಶರ್ಮಾ ಎಂಬ ಪೊಲೀಸ್ ಕಾನ್ಸ್ ಟೇಬಲ್ ಉತ್ತರಪ್ರದೇಶದಲ್ಲಿರುವ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾಚೋರ್ ಪೊಲೀಸ್
ಠಾಣಾ ಇನ್ಸ್ ಪೆಕ್ಟರ್ ಗೆ ಕರೆ ಮಾಡಿದಾಗ,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರಂತೆ. ಅಲ್ಲದೇ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಕೂಡಾ ಸಲಹೆ ನೀಡಿದ್ದರು.
ನಂತರ ಉತ್ತರಪ್ರದೇಶದಿಂದ ಸತತವಾಗಿ 96ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಹೊರಟಿದ್ದು, ಕೈಕಾಲು ನೋಯುತ್ತಿದ್ದರೂ ಕೂಡಾ ಕರ್ತವ್ಯಕ್ಕೆ ಹಾಜರಾಗಲೇಬೇಕೆಂದು ಹಠ ತೊಟ್ಟು ಠಾಣೆ ತಲುಪಿರುವುದಾಗಿ ಪಿಟಿಐ ಜತೆ ಮಾತನಾಡುತ್ತಿ ತಿಳಿಸಿದ್ದಾರೆ.
ಪ್ರಯಾಣದ ವಿವರ ಹಂಚಿಕೊಂಡಿರುವ ಶರ್ಮಾ, ಮಾರ್ಚ್ 25ರಂದು ಇಟಾವ ನಗರದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದು, ಕೆಲವೆಡೆ ಮೋಟಾರ್ ಬೈಕ್ ನಲ್ಲಿ ಮಧ್ಯ ಡ್ರಾಪ್ ಕೊಟ್ಟಿದ್ದರು. ಶನಿವಾರ ಮಧ್ಯಪ್ರದೇಶದ ರಾಜ್ ಗಢ್ ತಲುಪಿರುವುದಾಗಿ ತಿಳಿಸಿದ್ದಾರೆ.
ದಾರಿಯಲ್ಲಿ ನಡೆದು ಬರುವಾಗ ಒಂದು ದಿನ ತಿನ್ನಲು ಏನೂ ಸಿಗಲಿಲ್ಲವಂತೆ, ನಂತರ ಕೆಲವು ಸಾಮಾಜಿಕ ಸಂಘಟನೆಗಳು ತಿನ್ನಲು ಆಹಾರ ಕೊಟ್ಟಿರುವುದಾಗಿ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ. ನನ್ನ ಕಾಲಿನ ಪಾದದಲ್ಲಿ ಬೊಬ್ಬೆ ಎದ್ದಿದ್ದವು, ಇದರಿಂದಾಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಠಾಣಾಧಿಕಾರಿ ಸೂಚಿಸಿದ್ದರು, ನಾನು ಕೂಡಲೇ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ ಎಂದು ತಿಳಿಸಿದ್ದಾರೆ. ಶರ್ಮಾ 2018ರಲ್ಲಿ ಮಧ್ಯಪ್ರದೇಶದಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ