ಕಾಲರ್ ಟ್ಯೂನ್ಗಿಲ್ಲ ಅಮಿತಾಭ್ ಧ್ವನಿ
Team Udayavani, Jan 16, 2021, 2:00 AM IST
ಹೊಸದಿಲ್ಲಿ: ಲಕ್ಷಾಂತರ ಮೊಬೈಲ್ ರಿಂಗ್ ಆಗುವ ಸಂದರ್ಭದಲ್ಲಿ ಕೊರೊನಾ ಜಾಗೃತಿ ಬಗ್ಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಧ್ವನಿ ಇನ್ನು ಕೇಳಿಸಲಾರದು. 16ರಿಂದ ಲಸಿಕೆ ವಿತರಣೆ ಶುರುವಾಗುವ ಹಿನ್ನೆಲೆಯಲ್ಲಿ “ಹೊಸ ವರ್ಷವು ಕೋವಿಡ್-19 ಲಸಿಕೆಯ ರೂಪದಲ್ಲಿ ಹೊಸ ಭರವಸೆಯನ್ನು ಹೊತ್ತು ತಂದಿದೆ ‘ ಎಂಬ ಮಹಿಳೆಯೊಬ್ಬರ ಧ್ವನಿಯನ್ನು ಅಳವಡಿಸಲಾಗಿದೆ. ಅಮಿತಾಭ್ ಧ್ವನಿ ಬಳಕೆ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ದಿಲ್ಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ಸುದ್ದಿ ಮಾಡಿತ್ತು. ಖುದ್ದು ಅಮಿತಾಭ್ ಕುಟುಂಬಕ್ಕೇ ಸೋಂಕಿನಿಂದ ಪಾರಾಗಲು ಆಗಿಲ್ಲ, ಹೀಗಿರುವಾಗ ಕೇಂದ್ರ ಸರಕಾರ ಅವರಿಗೆ ಹಣ ಕೊಟ್ಟು ಧ್ವನಿ ಬಳಸುವುದೇಕೆ ಎನ್ನುವುದು ಅರ್ಜಿದಾರರ ಪ್ರಶ್ನೆಯಾಗಿತ್ತು.