ಸಾಧಕನ ಕನಸಿಗೆ 34000 ಕೋಟಿ ಬಂಡವಾಳ
Team Udayavani, Feb 21, 2018, 9:45 AM IST
ಮುಂಬಯಿ: ಸ್ಪಷ್ಟ ಗುರಿ, ದೃಢ ನಿರ್ಧಾರ, ಗುರಿಯನ್ನು ಬಿಡದೇ ಸಾಧಿಸುವ ಛಲ. ಇಷ್ಟಿದ್ದರೆ ಸಾಕು, ಎಂಥ ಅಡೆ ತಡೆಗಳನ್ನಾದರೂ ದಾಟಿ ನಮ್ಮ ಗುರಿಯನ್ನು ಮುಟ್ಟಬಹುದೆಂದು ಸಾಧಿಸಿ ತೋರಿಸಿರುವ ಹಲವಾರು ಸಾಧಕರ ಪಟ್ಟಿಗೆ ಈಗ ಹೊಸ ಸೇರ್ಪಡೆ ಮಹಾರಾಷ್ಟ್ರ ಕಂಡಿವಿಲಿಯ, ಅಮೋಲ್ ಯಾದವ್.
ಆರು ವರ್ಷಗಳ ಹಿಂದೆ ಆರು ಸೀಟರ್ಗಳ ಮಿನಿ ವಿಮಾನವನ್ನು ತನ್ನ ಮನೆಯ ಚಾವಣಿಯ ಮೇಲೆಯೇ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ 34 ವರ್ಷದ ಈ ಮಾಜಿ ಪೈಲಟ್ನ ಸಾಧನೆ ಮೆಚ್ಚಿರುವ ಮಹಾರಾಷ್ಟ್ರ ಸರಕಾರ, “ಮ್ಯಾಗ್ನೆಟಿಕ್ ಮಹಾರಾಷ್ಟ್ರ’ ಹೂಡಿಕೆದಾರರ ಸಮಾವೇಶದಲ್ಲಿ ಅಮೋಲ್ ಸ್ಥಾಪಿಸಿರುವ “ಥ್ರ್ಸ್ಟ್ ಏರ್ಕ್ರಾಫ್ಟ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಜತೆ 34 ಸಾವಿರ ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಇಷ್ಟೇ ಅಲ್ಲ, ಪಲ್ಗಾರ್ ಜಿಲ್ಲೆಯ ಕೆಳ್ವೆ ಪ್ರಾಂತ್ಯದಲ್ಲಿ 157 ಎಕರೆ ಭೂಮಿಯನ್ನು ಅಮೋಲ್ ಅವರ ಸಂಸ್ಥೆಗಾಗಿ ಮಂಜೂರು ಮಾಡಿದೆ.
ಸದ್ಯಕ್ಕೆ, ಅಮೆರಿಕದ ಪ್ರಾಟ್ ಆ್ಯಂಡ್ ವ್ಹಿಟ್ನಿ ಸಂಸ್ಥೆಯಿಂದ ವಿಮಾನದ ಎಂಜಿನ್ ಹಾಗೂ ಇನ್ನಿತರ ತಾಂತ್ರಿಕ ಪರಿಕರಗಳನ್ನು ಆಮದು ಮಾಡಿಕೊಳ್ಳಲಿರುವ ಥÅಸ್ಟ್ ಏರ್ಕ್ರಾಫ್ಟ್ ಸಂಸ್ಥೆ, ಇನ್ನಾರು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ದೇಶದ ಮೊಟ್ಟ ಮೊದಲ ಖಾಸಗಿ ವಿಮಾನ ತಯಾರಿಕಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದೆಲ್ಲ ಸಾಧ್ಯವಾಗಿದ್ದು, ತಜ್ಞರೂ ತಲೆದೂಗಬಲ್ಲ ವಿಮಾನ ತಯಾರಿಸಿದ ಈತನ ಛಾತಿಯಿಂದ ಹಾಗೂ ಪ್ರಧಾನಿ ಕಚೇರಿಯ ಪ್ರೋತ್ಸಾಹದಿಂದ. ಹಾಗಾಗಿಯೇ, ತಾವು ತಯಾರಿಸಿದ ಮೊದಲ ವಿಮಾನಕ್ಕೆ “ವಿಟಿ-ಎನ್ಎಂಡಿ’ (ಎನ್ಎಂಡಿ- ನರೇಂದ್ರ ಮೋದಿ ದೇವೇಂದ್ರ) ಎಂದು ಹೆಸರಿಟ್ಟಿದ್ದಾರೆ ಅಮೋಲ್.
ಅಮೋಲ್ ಸಾಹಸಗಾಥೆ
ಜೆಟ್ ಏರ್ವೆàಸ್ನಲ್ಲಿ ಉಪ ಮುಖ್ಯ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರೂ ಸ್ವಂತವಾಗಿ ವಿಮಾನ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಅಮೋಲ್ ಅವರು, ಈ ಪ್ರತಿಭೆ ಸಾಬೀತುಪಡಿಸಲು ತಾವಿದ್ದ ಮನೆಯನ್ನೇ ಮಾರಿದರು. ಅದರಿಂದ ಬಂದ ಹಣವನ್ನು ವಿಮಾನ ತಯಾರಿಕೆಗೆ ಬಳಸಿದ ಅವರು, ಕಂಡಿವಾಲಿ ಉಪನಗರದ ಅಪಾರ್ಟ್ಮೆಂಟ್ನಲ್ಲಿ ತಾವಿದ್ದ ಫ್ಲ್ಯಾಟ್ ಮೇಲಿನ ಸುಮಾರು 1,600 ಚದರಡಿ ಚಾವಣಿಯಲ್ಲಿ ತಮ್ಮ ಕನಸಿನ ವಿಮಾನ ನಿರ್ಮಿ ಸಿದರು. ಸುಮಾರು 4 ಕೋಟಿ ರೂ. ವೆಚ್ಚ ಮಾಡಿ, 6 ವರ್ಷಗಳಲ್ಲಿ ಏಕಾಂಗಿಯಾಗಿ, 6 ಸೀಟರ್ಗಳ, ಸುಮಾರು 13 ಸಾವಿರ ಕಿ.ಮೀ. ಎತ್ತರಕ್ಕೆ ಹಾರಬಲ್ಲ ಲಘು ವಿಮಾನ ನಿರ್ಮಿಸಿದರು.
ಆದರೆ, ಇದರ ನೋಂದಣಿಗೆ ಸರಕಾರಿ ಅಧಿಕಾರಿಗಳಿಂದ ಅಡೆ ತಡೆಗಳು ಬಂದವು. ಆಗಲೇ, ಇವರು ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ರನ್ನು ಸಂಪರ್ಕಿಸಿದ್ದು. ಇವರ ಮಧ್ಯಪ್ರವೇಶದಿಂದಾಗಿ, ಅಮೋಲ್ ವಿಮಾನ ನೋಂದಣಿ ಸುಗಮವಾಯಿತಲ್ಲದೆ, ನಾಗರಿಕ ವಿಮಾನಯಾನ ಮಹಾ ನಿರ್ದೇ ಕರ ಕಚೇರಿ (ಡಿಜಿಸಿಎ) ಅಧಿಕಾರಿಗಳ ಮುಂದೆ ವಿಮಾನದ ಪ್ರಾತ್ಯ ಕ್ಷಿಕೆ ನೀಡಿದರು. ಇದಕ್ಕೆ ಡಿಜಿಸಿಎ ಒಪ್ಪಿಗೆಯೂ ದೊರೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
MUST WATCH
ಹೊಸ ಸೇರ್ಪಡೆ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ