ವಿಮಾನ ಅವಶೇಷ ಪತ್ತೆಯಾದ ತಾಣದಲ್ಲಿ ಇಳಿಯಲು ಐಎಎಫ್ ಹರಸಾಹಸ
Team Udayavani, Jun 12, 2019, 12:04 PM IST
ಹೊಸದಿಲ್ಲಿ : ಕಳೆದ ಜೂನ್ 3ರಂದು ಅಸ್ಸಾಂ ನ ಜೋರ್ಹಾಟ್ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾದ ಅತ್ಯಂತ ಎತ್ತರದ, ದುರ್ಗಮ ಪರ್ವತ ಪ್ರದೇಶದಲ್ಲಿ ಇಳಿಯಲು ಹರಸಾಹ ಪಟ್ಟರೂ ನಿನ್ನೆ ಮಂಗಳವಾರ ಐಎಎಫ್ ಹೆಲಿಕಾಪ್ಟರ್ಗಳಿಗೆ ಸಾಧ್ಯವಾಗಿರಲಿಲ್ಲ; ಹಾಗಾಗಿ ಆ ಪ್ರಯತ್ನವನ್ನು ಇಂದು ಬುಧವಾರವೂ ಮುಂದುವರಿಸಲಾಗಿದೆ.
ನಾಪತ್ತೆಯಾದ ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಲಿಪೋ ಸಮೀಪದ ಅತ್ಯಂತ ಎತ್ತರದ ಮತ್ತು ದುರ್ಗಮ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿದ್ದವು. ಆ ತಾಣವನ್ನು ನಿರ್ದಿಷ್ಟವಾಗಿ ಗುರುತಿಸಲಾದ ಹೊರತಾಗಿಯೂ ಕಡಿದಾದ ಮತ್ತು ಎತ್ತರದ ಆ ಪ್ರದೇಶದಲ್ಲಿ ಇಳಿಯಲು ಹೆಲಿಕಾಪ್ಟರ್ಗಳಿಗೆ ಸಾಧ್ಯವಾಗಿರಲಿಲ್ಲ.
ಇಂದು ಬುಧವಾರ ಐಎಎಫ್ ಹೆಲಿಕಾಪ್ಟರ್ ಗಳು ತಮ್ಮ ಕಾರ್ಯಾಚರಣೆ ಮುಂದುವರಿಸಿವೆ. ಅವಶೇಷ ಪತ್ತೆಯಾದ ತಾಣದಲ್ಲಿ ಅವುಗಳಿಗೆ ಇಳಿಯಲು ಸಾಧ್ಯವಾದಾಗ ವಿಮಾನದೊಳಗೆ ಇದ್ದವರ ಸ್ಥಿತಿಗತಿ ಮತ್ತು ಬದುಕುಳಿದಿರಬಹುದಾದವರನ್ನು ಪತ್ತೆ ಹಚ್ಚುವುದು ಸುಲಭವಾದೀತು ಎಂದು ಐಎಎಫ್ ಹೇಳಿದೆ.
ಐಎಎಫ್ನ ಈ ಕಾರ್ಯಾಚರಣೆಯಲ್ಲಿ ಎಂಐ-17ವಿ5, ಚೀತಾ ಮತ್ತು ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ಗಳು ತೊಡಗಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ