ರಿಷಿ ಸುನಕ್ ಕುರಿತ ಆನಂದ್ ಮಹೀಂದ್ರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್…
ಹಾಸ್ಯದ ಮತ್ತು ವ್ಯಂಗ್ಯ ಸಂದೇಶಗಳು ಯಾವಾಗಲೂ ನೆಟ್ಟಿಗರ ಹೃದಯವನ್ನು ಗೆಲ್ಲುತ್ತವೆ.
Team Udayavani, Oct 25, 2022, 1:29 PM IST
ಹೊಸದಿಲ್ಲಿ: ಯುನೈಟೆಡ್ ಕಿಂಗ್ಡಂನ ಭಾರತೀಯ ಮೂಲದ ಮೊದಲ ಪ್ರಧಾನ ಮಂತ್ರಿಯಾದ ರಿಷಿ ಸುನಕ್ ಅವರನ್ನು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.
ಆದರೆ ಬಿಲಿಯನೇರ್ ಕೈಗಾರಿಕೋದ್ಯಮಿ ಯುನೈಟೆಡ್ ಕಿಂಗ್ಡಂನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರನ್ನು ಉಲ್ಲೇಖಿಸಿ ಮಾಡಿದ ಟ್ವೀಟ್ ಇಂಟರ್ನೆಟ್ನಲ್ಲಿ ಹಲವರ ಹೃದಯಗಳನ್ನು ಗೆಲ್ಲುತ್ತಿದೆ.
“…ಎಲ್ಲಾ ಭಾರತೀಯ ನಾಯಕರು ಅಲ್ಪ ಸಾಮರ್ಥ್ಯ ಉಳ್ಳವರು ಮತ್ತು ತೇಜೋಹೀನ ಪುರುಷರಾಗಿರುತ್ತಾರೆ” ಎಂದು ಚರ್ಚಿಲ್ ಹೇಳಿದ್ದಾರೆ. ಆದರೆ ಇಂದು, ನಮ್ಮ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ನಾವು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಕೆ ಪ್ರಧಾನಿಯಾಗಿ ಪಟ್ಟಾಭಿಷೇಕಗೊಳ್ಳುವುದನ್ನು ನಾವು ಉತ್ಸುಕರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೊನೆಗೆ ಜೀವನವೇ ಸುಂದರ.., ಎಂದು ಅವರು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ.
In 1947 on the cusp of Indian Independence, Winston Churchill supposedly said “…all Indian leaders will be of low calibre & men of straw.” Today, during the 75th year of our Independence, we’re poised to see a man of Indian origin anointed as PM of the UK. Life is beautiful…
— anand mahindra (@anandmahindra) October 24, 2022
ಮಹೀಂದ್ರಾ ಅವರ ಈ ಪೋಸ್ಟ್ 14.3k ಗೂ ಹೆಚ್ಚು ರಿಟ್ವೀಟ್ಗಳು, 917 ಕ್ಕೂ ಹೆಚ್ಚು ಕೋಟ್ ಟ್ವೀಟ್ಗಳು ಮತ್ತು 93.7k ಲೈಕ್ಗಳನ್ನು ಗಳಿಸಿದೆ. ಜನಪ್ರಿಯ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಇಂತಹ ಮಾಹಿತಿಯುತ, ಪ್ರಶಂಸನಾರ್ಹ, ಹಾಸ್ಯದ ಮತ್ತು ವ್ಯಂಗ್ಯ ಸಂದೇಶಗಳು ಯಾವಾಗಲೂ ನೆಟ್ಟಿಗರ ಹೃದಯವನ್ನು ಗೆಲ್ಲುತ್ತವೆ.
ರಿಷಿ ಸುನಕ್ ಪೂರ್ವ ಆಫ್ರಿಕಾದಿಂದ ಬ್ರಿಟನ್ಗೆ ವಲಸೆ ಬಂದ ಭಾರತೀಯ ಮೂಲದ ಪೋಷಕರಿಗೆ ಸೌತಾಂಪ್ಟನ್ ಎಂಬಲ್ಲಿ ಸುನಕ್ ಜನಿಸಿದರು. ಸುನಕ್ ಅವರು ಇನ್ಫೋಸಿಸ್ ,ಬಿಲಿಯನೇರ್ ಉದ್ಯಮಿ ಎನ್ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಅಳಿಯ (ಪುತ್ರಿ ಅಕ್ಷತಾ ಮೂರ್ತಿಜತೆ ವಿವಾಹ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ