ತಿರುಪತಿಯಿಂದ ತಿರುಮಲಕ್ಕೆ ಮತ್ತೊಂದು ರಸ್ತೆ
Team Udayavani, Dec 13, 2021, 11:15 PM IST
ಸಾಂದರ್ಭಿಕ ಚಿತ್ರ.
ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ತಿರುಮಲಕ್ಕೆ ತಿರುಪತಿಯಿಂದ ಮತ್ತೊಂದು ಘಾಟ್ ರಸ್ತೆಯನ್ನು ನಿರ್ಮಿಸಲು ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಂಡಳಿ ಸಜ್ಜಾಗಿದೆ.
ತಿರುಮಲಕ್ಕೆ ತಿರುಪತಿಯಿಂದ ಈವರೆಗೆ ಎರಡು ರಸ್ತೆಗಳಿದ್ದವು. ಅದರಲ್ಲಿ ಒಂದು ರಸ್ತೆಯನ್ನು ತಿರುಮಲಕ್ಕೆ ತೆರಳುವುದಕ್ಕೆ ಬಳಕೆ ಮಾಡಲಾಗುತ್ತಿದ್ದರೆ ಇನ್ನೊಂದನ್ನು ತಿರುಮಲದಿಂದ ವಾಪಸು ತಿರುಪತಿಗೆ ಬರುವುದಕ್ಕೆ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತಿರುಮಲಕ್ಕೆ ತೆರಳುವ ರಸ್ತೆ ಹಾಳಾಗಿದೆ. ಈಗ ಒಂದೇ ರಸ್ತೆಯಲ್ಲಿ ಸಂಚಾರ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಇವೆರೆಡು ರಸ್ತೆಗಳಲ್ಲದೆ ಮತ್ತೂಂದು ರಸ್ತೆಯನ್ನು ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಂಡಳಿ ನಿರ್ಧರಿಸಿದೆ.
ಇದನ್ನೂ ಓದಿ:ಅಭ್ಯಾಸದ ವೇಳೆ ರೋಹಿತ್ ಶರ್ಮ ಕೈಗೆ ಏಟು : ಪಾಂಚಾಲ್ಗೆ ಬುಲಾವ್
ಹಾಗೆಯೇ ಮಳೆಯಿಂದಾಗಿ ಹಾಳಾಗಿರುವ ರಸ್ತೆಯ ದುರಸ್ಥಿಗೆ 3.95 ಕೋಟಿ ರೂ. ಮತ್ತು ಪಾದಚಾರಿಗಳ ಮಾರ್ಗವಾದ ಶ್ರೀವರಿಮೆಟ್ಟು ದುರಸ್ಥಿಗೆ 3.60 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ದೇಗುಲಕ್ಕೆ ತಿರುಪತಿಯಿಂದ ಇರುವ ಶತಮಾನಗಳ ಹಳೆದ ಟ್ರೆಕ್ಕಿಂಗ್ ಹಾದಿಯನ್ನೂ ಅಭಿವೃದ್ಧಿಪಡಿಸಿ ಬಳಕೆಗೆ ಯೋಗ್ಯ ಮಾಡುವುದಾಗಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು
Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್ ಆಡಲಿ: ಪೊವೆಲ್
ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್ಗೆ ಅಮೆರಿಕ ಸಲಹೆ
MUST WATCH
ಹೊಸ ಸೇರ್ಪಡೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು