ದಾವೂದ್ನಿಂದ ಬೆದರಿಕೆ ಕರೆ: ಅಂಜಲಿ ದಮಾನಿಯಾ ದೂರು
Team Udayavani, Sep 24, 2017, 7:45 AM IST
ಮುಂಬೈ: ಪಾಕಿಸ್ತಾನ ಮೂಲದ ಸಂಖ್ಯೆಯಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಬಿಜೆಪಿ ನಾಯಕ ಏಕನಾಥ್ ಖಾಡ್ಸೆ ವಿರುದ್ಧದ ದೂರು ವಾಪಸ್ ಪಡೆಯುವಂತೆ ಧಮಕಿ ಹಾಕ ಲಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಅಂಜಲಿ ದಮಾನಿಯಾ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಈ ಕರೆ ಬಂದಿದ್ದು, ಟ್ರೂ ಕಾಲರ್ನಲ್ಲಿ ಆ ಸಂಖ್ಯೆ “ದಾವೂದ್ 2′ ಎಂದು ದಾಖಲಾಗಿದೆ. ಕೂಡಲೇ ಖಾಡ್ಸೆ ವಿರುದ್ಧದ ಎಲ್ಲ ದೂರುಗಳನ್ನೂ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
4 ಬಾರಿ ಮಾತಾಡಿದ್ದೆ: ಈ ನಡುವೆ, ದಾವೂದ್ಗೆ ಸಂಬಂಧಿಸಿ ಇನ್ನಷ್ಟು ವಿಚಾರಗಳನ್ನು ಆತನ ಸೋದರ ಇಕ್ಬಾಲ್ ಕಸ್ಕರ್ ಬಹಿರಂಗಪಡಿಸಿದ್ದಾನೆ. ನಾನು ಇತ್ತೀಚೆಗೆ 4 ಬಾರಿ ದಾವೂದ್ನೊಂದಿಗೆ ಫೋನ್ನಲ್ಲಿ ಮಾತನಾಡಿದ್ದೇನೆ. ಬರ್ನರ್ ಫೋನ್ ಮತ್ತು ಸಿಮ್ ಬಾಕ್ಸ್ಗಳನ್ನು ಬಳಸಿ ಕರೆ ಮಾಡಿದ್ದೆ. ದಾವೂದ್ ತನ್ನ ಗುರುತು ಸಿಗಬಾರದು ಎಂದು ಯಾವುದೇ ನೈಜ ದಾಖಲೆಗಳಿಲ್ಲದೆಯೇ ಪಾಕಿಸ್ತಾನದಿಂದ ದುಬೈಗೆ ಪ್ರಯಾಣ ಬೆಳೆಸುತ್ತಾನೆ ಎಂದು ಕಸ್ಕರ್ ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್