ಪುಳಕಿತ್ ರೆಸಾರ್ಟ್ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಯ ಅಡ್ಡೆಯಾಗಿತ್ತು; ಮಾಜಿ ಉದ್ಯೋಗಿ
ಈ ಸಂದರ್ಭದಲ್ಲಿ ಪುಳಕಿತ್ ಆರ್ಯ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ
Team Udayavani, Sep 27, 2022, 6:25 PM IST
ಮೀರತ್: ಅಂಕಿತ್ ಭಂಡಾರಿ ಕೊಲೆ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ರಿಷಿಕೇಶದಲ್ಲಿರುವ ಪುಳಕಿತ್ ಆರ್ಯ ಒಡೆತನದ ರೆಸಾರ್ಟ್ ನಟೋರಿಯಸ್ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಯ ದೊಡ್ಡ ಅಡ್ಡೆಯಾಗಿತ್ತು ಎಂದು ರೆಸಾರ್ಟ್ ನ ಮಾಜಿ ಉದ್ಯೋಗಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ತಾಕತ್ತಿದ್ದರೆ ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ನೀಡಲಿ: ಕಾರಜೋಳ
ಎನ್ ಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಹೆಸರು ಹೇಳಲು ಇಚ್ಛಿಸದ ಮಾಜಿ ಉದ್ಯೋಗಿ ಪುಳಕಿತ್ ಆರ್ಯ ಬಗ್ಗೆ ಹಲವು ಆರೋಪ ಮಾಡಿರುವುದಾಗಿ ತಿಳಿಸಿದೆ. ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಿರಂತರವಾಗಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪುಳಕಿತ್ ಆರ್ಯ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಿದ್ದಾರೆ.
ನಾನು ಮೇ ತಿಂಗಳಿನಲ್ಲಿ ರಿಷಿಕೇಷದಲ್ಲಿರುವ ಆರ್ಯ ಒಡೆತನದ ವನಂತಾರಾ ರೆಸಾರ್ಟ್ ಗೆ ಕೆಲಸಕ್ಕಾಗಿ ಸೇರಿಕೊಂಡಿದ್ದೆ. ಆದರೆ ನಾನು ಜುಲೈನಲ್ಲಿ ಕೆಲಸ ಬಿಟ್ಟಿದ್ದೆ. ಅಂಕಿತ ಭಂಡಾರಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪುಳಕಿತ್ ಆರ್ಯ, ಹಲವು ಯುವತಿಯರನ್ನು ರೆಸಾರ್ಟ್ ಗೆ ಕರೆತಂದು ಅವರನ್ನು ವಿಐಪಿಗಳು ಉಪಯೋಗಿಸಿಕೊಳ್ಳುತ್ತಿದ್ದರು ಎಂದು ದೂರಿರುವುದಾಗಿ ವರದಿ ವಿವರಿಸಿದೆ.
ಪುಳಕಿತ್ ಆರ್ಯ ತನ್ನ ರೆಸಾರ್ಟ್ ಗೆ ಆಗಮಿಸುವ ಅತಿಥಿಗಳನ್ನು ಮೆಚ್ಚಿಸಲು ಹೊರಗಿನಿಂದ ಹುಡುಗಿಯರನ್ನು ಕರೆತರುತ್ತಿದ್ದ ಎಂದು ಮತ್ತೊಬ್ಬ ಮಾಜಿ ಉದ್ಯೋಗಿ ಎಎನ್ ಐಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್