ಚೆನ್ನೈ ಆಸ್ಪತ್ರೆಯಲ್ಲಿ ರಕ್ತ ಮರುಪೂರಣ: ಇನ್ನೋರ್ವ ಮಹಿಳೆಗೆ ಎಚ್ಐವಿ
Team Udayavani, Dec 28, 2018, 2:12 PM IST
ಚೆನ್ನೈ : ರಕ್ತದಲ್ಲಿ ಕಡಿಮೆ ಹಿಮೋಗ್ಲಾಬಿನ್ ಇರುವ ಕಾರಣಕ್ಕೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಮರಪೂರಣ ಚಿಕಿತ್ಸೆಗೆ ಒಳಪಟ್ಟ ತನಗೆ ಎಚ್ಐವಿ ಸೋಂಕು ತಗಲಿದೆ ಎಂದು ತಮಿಳು ನಾಡಿನ ಮಹಿಳೆ ಹೇಳಿಕೊಂಡಿದ್ದು ಇದರೊಂದಿಗೆ ರಾಜ್ಯದಲ್ಲಿ ಎರಡನೇ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಮಹಿಳೆ ಚಿಕಿತ್ಸೆ ಪಡೆದುಕೊಂಡಿರುವ ಸರಕಾರಿ ಆಸ್ಪತ್ರೆ ಆಕೆಯ ಆರೋಪವನ್ನು ತಿರಸ್ಕರಿಸಿದೆ.
ತಮಿಳು ಟಿವಿ ಚ್ಯಾನಲ್ ಜತೆಗೆ ಇಂದು ಶುಕ್ರವಾರ ಮಾತನಾಡಿದ 20ರ ಹರೆಯದ ಮಹಿಳೆಯು, ಈ ವರ್ಷ ಎಪ್ರಿಲ್ನಲ್ಲಿ ಗರ್ಭವತಿಯಾಗಿದ್ದ ತಾನು ರಕ್ತ ಮರುಪೂರಣ ಪಡೆದಾಗ ತನಗೆ ಎಚ್ಐವಿ ಸೋಂಕು ತಗಲಿತೆಂದು ಹೇಳಿದ್ದಾಳೆ.
ಎರಡು ದಿನಗಳ ಹಿಂದಷ್ಟೇ ತಮಿಳು ನಾಡಿನ ವಿರೂಧನಗರದಲ್ಲಿ 24 ವರ್ಷ ಪ್ರಾಯ ಗರ್ಭಿಣಿಗೆ ರಕ್ತ ಮರುಪೂರಣ ಮಾಡುವ ಸಂದರ್ಭದಲ್ಲಿ ಆಕೆಗೆ ಎಚ್ಐವಿ ತಗುಲಿರುವುದು ಪತ್ತೆಯಾಗಿತ್ತು.
ರಕ್ತ ಮರುಪೂರಣಕ್ಕೆ ಮುನ್ನ ರಕ್ತವನ್ನು ಎಚ್ಐವಿಗಾಗಿ ಸ್ಕ್ರೀನ್ ಮಾಡದಿರುವ ನಿರ್ಲಕ್ಷ್ಯವನ್ನು ರಕ್ತ ಬ್ಯಾಂಕ್ ಸಿಬಂದಿಗಳು ತೋರಿರುವ ಕಾರಣಕ್ಕೆ ತಮಿಳು ನಾಡು ಸರಕಾರ ರಾಜ್ಯದಲ್ಲಿನ ಎಲ್ಲ ರಕ್ತ ಬ್ಯಾಂಕ್ಗಳಲ್ಲಿ ರಕ್ತದ ಸ್ಟಾಕನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಲು ಆದೇಶಿಸಿತ್ತು.
ವಿರೂಧನಗರಕ್ಕೆ ಸಮೀಪದ ಸಟ್ಟೂರಿನ ಸರಕಾರಿ ಆಸ್ಪತ್ರೆಯ ರಕ್ತ ಬ್ಯಾಂಕಿನ ಮೂವರು ಲ್ಯಾಬ್ ಟೆಕ್ನೀಶಿಯನ್ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಇಂದು ಬುಧವಾರ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ