ಅಸ್ಸಾಂನಲ್ಲಿ ಥಳಿತದಿಂದ ಸಾಧುಗಳ ರಕ್ಷಿಸಿದ ಸೇನೆ
Team Udayavani, Jul 7, 2018, 6:00 AM IST
ಹಫ್ಲಾಂಗ್: ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಥಳಿತ, ಹತ್ಯೆ ಪ್ರಕರಣಗಳು ಇನ್ನೂ ನಿಂತಿಲ್ಲ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ 3 ಸಾಧುಗಳನ್ನು ಸೇನೆ ಹಾಗೂ ಪೊಲೀಸರು ಶುಕ್ರವಾರ ರಕ್ಷಿಸಿದ್ದಾರೆ. ಇವರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸಲು ಸ್ಥಳೀಯರು ಮುಂದಾ ಗಿದ್ದರು. ರೈಲ್ವೆ ಸ್ಟೇಷನ್ ಬಳಿಯೇ ಸೇನಾ ನೆಲೆಯಲ್ಲಿ ಇದ್ದ ಅಧಿಕಾರಿಗಳು ಈ ಸಾಧುಗಳನ್ನು ರಕ್ಷಿಸಿದ್ದಾರೆ. ಇವರನ್ನು ಥಳಿಸಲು ನೂರಕ್ಕೂ ಹೆಚ್ಚು ಜನರು ಸೇರಿದ್ದರು. ಸಾಧುಗಳ ಬಳಿಯಿದ್ದ ಸಾಮಗ್ರಿ ಗಳನ್ನು ಕಿತ್ತೆಸೆದು, ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಡಲಾಗಿತ್ತು. ಪೊಲೀಸರು ಬರು ವುದು ತಡವಾಗಿ ದ್ದರೆ ಸಾಧುಗಳನ್ನು ಥಳಿಸಿ ಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಪತ್ತೆಗೆ ಸಂಶೋಧಕರ ನೇಮಕ: ಸುಳ್ಳು ಸುದ್ದಿ ಹರಡುವುದನ್ನು ತಡೆಯುವುದಕ್ಕೆ ವಾಟ್ಸ್ಆ್ಯಪ್ ಇದೀಗ ಬಾಹ್ಯ ಬೆಂಬಲ ಪಡೆಯಲು ನಿರ್ಧರಿಸಿದೆ. ಇದಕ್ಕಾಗಿ ಸಂಶೋಧಕರನ್ನು 3.25 ಲಕ್ಷ ರೂ. ವೇತನ ನೀಡಿ ನೇಮಿಸಿಕೊಳ್ಳಲಿದೆ. ಇವರು ತಮ್ಮದೇ ಮೂಲಗಳಿಂದ ವಾಟ್ಸ್ಆ್ಯಪ್ನಲ್ಲಿ ಹರಿದಾಡುವ ಸುಳ್ಳು ಸುದ್ದಿ ಪತ್ತೆ ಮಾಡಬೇಕಿರುತ್ತದೆ. ಸಾಮಾಜಿಕ ವಿಜ್ಞಾನ ಅಥವಾ ಇತರ ಸಂಬಂಧಿತ ಅನುಭವಗಳನ್ನು ಹೊಂದಿರು ವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು