ಯುದ್ಧಕ್ಕೆ ಸಿದ್ಧ-ದೇಶದ ಸಂವಿಧಾನ ನಮಗೆ ಮಾರ್ಗದರ್ಶನ ನೀಡಬೇಕು: ಆರ್ಮಿ ಜನರಲ್ ನರಾವಣೆ
ಭಾರತ ಜಾತ್ಯತೀತ, ಸಂವಿಧಾನಬದ್ಧವಾದ ಗಣರಾಜ್ಯವಾಗಿದೆ
Team Udayavani, Jan 11, 2020, 2:41 PM IST
ನವದೆಹಲಿ: ಭಾರತೀಯ ಸೇನಾಪಡೆ ದೇಶದ ಸಂವಿಧಾನಬದ್ಧ ಒಟ್ಟು ಮೌಲ್ಯಗಳ ತಳಪಾಯದ ಮೇಲೆ ಪ್ರಮಾಣವಚನ ಸ್ವೀಕರಿಸಿದೆ. ಭಾರತ ಜಾತ್ಯತೀತ, ಸಂವಿಧಾನಬದ್ಧವಾದ ಗಣರಾಜ್ಯವಾಗಿದೆ ಎಂದು ಆರ್ಮಿ ಮುಖ್ಯ ಜನರಲ್ ಎಂಎಂ ನರಾವಣೆ ತಿಳಿಸಿದ್ದಾರೆ.
ದೇಶದ ಸೇನಾಪಡೆ ಭಾರತದ ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಮಾನ ಹಿತಾಸಕ್ತಿ ಒಳಗೊಂಡಿರುವ ಸಂವಿಧಾನ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇತ್ತೀಚೆಗೆ ಸೇನೆಯ ನಿರ್ಗಮಿತ ಜನರಲ್ ಬಿಪಿನ್ ರಾವತ್, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದನ್ನು ಟೀಕಿಸಿ ಪ್ರತಿಕ್ರಿಯೆ ನೀಡಿದ್ದರು. ನಾಯಕತ್ವ ಹೊಂದಿದವರು ಜನರನ್ನು ತಪ್ಪು ದಾರಿಯತ್ತ ಕೊಂಡೊಯ್ಯಬಾರದು. ದೇಶದಲ್ಲಿನ ಬಹುಸಂಖ್ಯೆ ವಿವಿಗಳ ಮತ್ತು ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಹಿಂಸಾಚಾರ, ಬೆಂಕಿಹಚ್ಚಿರುವ ಘಟನೆಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದ್ದೇವೆ. ಇದು ನಾಯಕತ್ವದ ಗುಣವಲ್ಲ ಎಂದು ರಾವತ್ ಕಳೆದ ತಿಂಗಳು ಟೀಕಿಸಿದ್ದರು.
ರಾವತ್ ಹೇಳಿಕೆಯ ನಂತರ ನೂತನ ಜನರಲ್ ನರಾವಣೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಭವಿಷ್ಯದ ಯುದ್ಧದ ದೃಷ್ಟಿಯಿಂದ ಸಂಕೀರ್ಣವಾದ ತರಬೇತಿಯನ್ನು ಸೇನಾಪಡೆಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.ಮುಂದಿನ ಯುದ್ಧಕ್ಕಾಗಿ ನಮ್ಮದು ಗುಣಮಟ್ಟದ ತರಬೇತಿ ವಿನಃ, ಯಾವ ಪ್ರಮಾಣದ್ದು ಎಂಬುದು ಮುಖ್ಯವಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ