ಆರ್ಟ್ ಆಫ್ ಲಿವಿಂಗ್ ಉತ್ಸವ: ಭಿನ್ನ ವರದಿ
Team Udayavani, Jul 29, 2017, 8:45 AM IST
ಹೊಸದಿಲ್ಲಿ: ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಂಬಂಧಿಸಿ ಎರಡು ಸಮಿತಿಗಳು ಭಿನ್ನ ವರದಿಯನ್ನು ನೀಡಿವೆ. ನಾಶವಾಗಿರುವ ಯಮುನಾ ನದಿ ಹರಿಯುವ ಜಾಗವನ್ನು ಸರಿಪಡಿಸಲು ಕ್ರಿಯಾಯೋಜನೆ ರೂಪಿಸಲೆಂದು ರಚಿಸಿದ್ದ ಸಮಿತಿ ಶುಕ್ರವಾರ ವರದಿ ಸಲ್ಲಿಸಿದ್ದು, ಕಾರ್ಯಕ್ರಮದಿಂದ ಮಣ್ಣಿನ ಸಾಂದ್ರತೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದೆ. ಈ ಹಿಂದೆ ವರದಿ ನೀಡಿದ್ದ 7 ತಜ್ಞರ ಸಮಿತಿ, ಕಾರ್ಯಕ್ರಮದಿಂದ ನದಿ ಹರಿವಿನ ಪ್ರದೇಶವು ಸಂಪೂರ್ಣ ನಾಶವಾಗಿದೆ ಎಂದು ಹೇಳಿತ್ತು.