ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಸೃಷ್ಟಿ: ಫಡ್ನವೀಸ್ ವಿಶ್ವಾಸ
Team Udayavani, Jun 12, 2018, 4:38 PM IST
ಮುಂಬಯಿ : ಕಂಪ್ಯೂಟರ್ ತಂತ್ರಜ್ಞಾನ ರಂಗದಲ್ಲಿನ ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟೆಲಿಜೆನ್ಸ್) ಅತ್ಯಧಿಕ ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ ಬಡವರು ಮತ್ತು ಸಿರಿವಂತರ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.
ಕೃತಕ ಬುದ್ಧಿಮತ್ತೆಯ ಮೂಲಕ ಆರೋಗ್ಯ ಸೇವೆಗಳನ್ನು ದುರ್ಗಮ ಪ್ರದೇಶಗಳ ವಾಸಿಗಳಿಗೂ ತಲುಪಿಸಲು ಸಾಧ್ಯವಾಗುವುದು ಎಂದವರು ಹೇಳಿದರು.
ಮಾಂಟ್ರಿಯಲ್ನಲ್ಲಿ ಕ್ಯುಬೆಕ್ ಡಾಮಿನಿಕ್ ಆ್ಯಂಗ್ಲೆಡ್ನ ವೈಸ್ ಪ್ರೀಮಿಯರ್ ಜತೆಗಿನ ಚರ್ಚಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಫಡ್ನವೀಸ್, ಕೃತಕ ಬುದ್ಧಿಮತ್ತೆ ಆಧರಿಸಿದ ಆಡಳಿತೆಯ ಕುರಿತು ಮಾತನಾಡಿದರು. ಕೃತಕ ಬುದ್ಧಿಮತ್ತೆಯನ್ನು ಬಳಸುವ ಮೂಲಕ ಉದ್ಯೋಗ ನಷ್ಟವಾಗುತ್ತದೆ ಎಂಬ ವಾದವನ್ನು ಫಡ್ನವೀಸ್ ತಿರಸ್ಕರಿಸಿದರು.