ಕೇಜ್ರಿವಾಲ್ ಯಾವುದನ್ನೂ ತಿಳಿಯದ ವಿಚಿತ್ರ ಮನುಷ್ಯ: ಅಮರೀಂದರ್
Team Udayavani, Nov 9, 2017, 7:15 PM IST
ಹೊಸದಿಲ್ಲಿ : ”ರೈತರು ಪ್ರತೀ ವರ್ಷ ಈ ದಿನಗಳಲ್ಲಿ ಬೆಳೆಗಳ ಅವಶೇಷವನ್ನು ಸುಡುವುದು ಸಾಮಾನ್ಯವಾಗಿದೆ. ಪರಿಣಾಮವಾಗಿ ವಿಪರೀತ ವಾಯು ಮಾಲಿನ್ಯಕೆ ಕಾರಣವಾಗುವ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯತ್ನಿಸಬೇಕಾಗಿದೆ. ಈ ಬಗ್ಗೆ ನಾನು ಅದೆಷ್ಟು ಹೇಳಿದರೂ ಪಂಜಾಬ್, ಹರಿಯಾಣ ಮುಖ್ಯಮಂತ್ರಿಗಳಿಂದ ಯಾವುದೇ ಉತ್ತರ ದೊರಕಿಲ್ಲ; ಯಾರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವಾಯು ಮಾಲಿನ್ಯ ನಿಯಂತ್ರಣವು ಅದರಿಂದ ಸಂಕಷ್ಟಕ್ಕೆ ಗುರಿಯಾಗಿರುವ ಎಲ್ಲ ರಾಜ್ಯಗಳ ಹೊಣೆಗಾರಿಕೆಯಾಗಿದೆ” ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಟ್ವಿಟರ್ ಮತ್ತು ಪತ್ರ ಮುಖೇನ ವ್ಯಕ್ತಪಡಿಸಿರುವ ಕಳವಳ, ದುಗುಡಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
“ಕೇಜ್ರಿವಾಲ್ ಒಬ್ಬ ವಿಚಿತ್ರ ಮನುಷ್ಯ. ಆತನಿಗೆ ಎಲ್ಲ ಸಮಸ್ಯೆಗಳ ಬಗೆಗೂ ಹೇಳುವುದಿದೆ; ಆದರೆ ಯಾವುದೇ ಸಮಸ್ಯೆಯನ್ನು ಆತ ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಪಂಜಾಬ್ ನಲ್ಲಿ ವರ್ಷಂಪ್ರತಿ ಈ ದಿನಗಳಲ್ಲಿ ರೈತರ ಕೃಷಿ ಕಾಯಕದಿಂದ 2 ಕೋಟಿ ಟನ್ ಬೆಳೆ ಅವಶೇಷ ಉತ್ಪತ್ತಿಯಾಗುತ್ತದೆ. ಇವನ್ನು ಸುಡಬಾರದೆಂದಾರೆ ಅವನ್ನು ಎಲ್ಲಿ ಸಂಗ್ರಹಿಸಿಡಬೇಕೆಂದು ರೈತರಿಗೆ ಹೇಳಲು ನನ್ನಿಂದ ಸಾಧ್ಯವಿಲ್ಲ’ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
“ನಾನು ಮಾತ್ರವೇ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಚರ್ಚಿಸಿದ ಮಾತ್ರಕ್ಕೆ ಅದು ಬಗೆ ಹರಿಯುವುದಿಲ್ಲ; ಆದುದರಿಂದ ಪಂಜಾಬ್, ಹರಿಯಾಣ, ದಿಲ್ಲಿ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಈ ಸಮಸ್ಯೆಗೆ ಪರಿಹಾರ ಕಾಣಲು ಯತ್ನಿಸಬೇಕು ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದೇನೆ’ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ