ಕೇಜ್ರಿವಾಲ್ ಮೇಲೆ ಖಾರದ ಪುಡಿ ದಾಳಿ
Team Udayavani, Nov 21, 2018, 4:05 AM IST
ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಖಾರದ ಪುಡಿ ದಾಳಿ ನಡೆದಿದ್ದು, ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಸಿಎಂ ಕಚೇರಿಯ ದ್ವಾರದಲ್ಲೇ ಈ ಘಟನೆ ನಡೆದಿದೆ. ಖಾರದಪುಡಿ ಎರಚುವ ಪ್ರಯತ್ನ ನಡೆಸಿದ ಅನಿಲ್ ಕುಮಾರ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಂಗೆ ಮನವಿ ಪತ್ರ ನೀಡುವ ನಾಟಕವಾಡಿದ ಅನಿಲ್, ಅನಂತರ ಕಾಲಿಗೆ ಬೀಳಲು ಹೋಗಿದ್ದ. ಕೇಜ್ರಿವಾಲ್ ಬೇಡ ಎನ್ನುವಂತೆ ಪಕ್ಕಕ್ಕೆ ಸರಿಯುತ್ತಿರುವಾಗಲೇ ತಂಬಾಕಿನ ಪ್ಯಾಕೆಟ್ ಒಂದರಲ್ಲಿ ಅಡಗಿಸಿ ತಂದಿದ್ದ ಖಾರದ ಪುಡಿಯನ್ನು ಅವರ ಮುಖಕ್ಕೆ ಎರಚಿದ್ದಾನೆ. ಸಿಎಂ ಕನ್ನಡಕ ಧರಿಸಿದ್ದರಿಂದ ಅವರಿಗೆ ಖಾರ ತಾಗಿಲ್ಲ. ಆದರೆ ಕನ್ನಡಕ ಕೆಳಕ್ಕೆ ಬಿದ್ದು ಒಡೆದಿದೆ. ಪೊಲೀಸರು ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯನ್ನು ಖಂಡಿಸಿರುವ ಆಮ್ ಆದ್ಮಿ ಪಾರ್ಟಿ, ಕೃತ್ಯದ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದೆ. ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ, ಕೃತ್ಯವನ್ನು ಖಂಡಿಸಿದ್ದು ಉನ್ನತ ತನಿಖೆಗೆ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್