ಸಿಎಂ ಕೇಜ್ರಿವಾಲ್ ಬಂಧು ವಿರುದ್ಧ ಪೊಲೀಸರ ತನಿಖೆ
Team Udayavani, Jan 25, 2017, 1:33 AM IST
ನವದೆಹಲಿ: ಕಾಮಗಾರಿಯೊಂದರ ವಿಚಾರದಲ್ಲಿ ವಂಚನೆ ಎಸಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾವನ ವಿರುದ್ಧ ಪೊಲೀಸರು ತನಿಖೆ ನಡೆಸಲು ತೀರ್ಮಾನಿಸಿದ್ದಾರೆ. ಅಧಿಕೃತವಾಗಿ ಕೇಸು ದಾಖಲಿಸಲಿದ್ದರೂ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿ ಸಿಎಂ ಅವರ ನಾದಿನಿ ಪತಿ ಸುರೇಂದ್ರ ಕುಮಾರ್ ಬನ್ಸಲ್ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯ ಗುತ್ತಿಗೆ ಪಡೆದಿದ್ದರೂ, ಕೆಲಸ ಪೂರೈಸದೆ ಬಿಲ್ ಮಂಜೂರು ಮಾಡಿಸಿಕೊಂಡಿದ್ದಾರೆಂದು ಎನ್ಜಿಒ ಒಂದು ದೆಹಲಿಯ ಸ್ಥಳೀಯ ಕೋರ್ಟ್ಗೆ ದೂರು ನೀಡಿತ್ತು. ಸುರೇಂದ್ರ ಕುಮಾರ್ ಪ್ರಭಾವ ಬೀರಿ ಈ ಗುತ್ತಿಗೆ ಪಡೆದುಕೊಂಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿಯವರೇ ನೆರವಾಗಿದ್ದಾರೆಂದು ಸಂಘಟನೆಯ ಆರೋಪ. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಬಿದ್ದರೆ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿತ್ತು.