ಜಿನ್ಪಿಂಗ್ “ದಂಗಲ್’ ವೀಕ್ಷಿಸಿದ್ದಾರಂತೆ: ಮೋದಿ
Team Udayavani, Oct 16, 2019, 5:41 AM IST
ಥನೇಸರ್/ಮುಂಬಯಿ: “ಇತ್ತೀ ಚೆಗೆ ತಮಿಳು ನಾಡಿಗೆ ಭೇಟಿ ನೀಡಿದ್ದ ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ತಾವು ದಂಗಲ್ ಸಿನಿಮಾ ವೀಕ್ಷಿಸಿರುವುದಾಗಿ ನನಗೆ ತಿಳಿಸಿದ್ದರು. ಅದನ್ನು ಕೇಳಿ ನನಗೆ ಹೆಮ್ಮೆಯಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹರ್ಯಾಣದ ಥನೇಸರ್ ಹಾಗೂ ಚರ್ಕಿ ದಾದ್ರಿಯಲ್ಲಿ ಮಂಗಳವಾರ ಅವರು ಚುನಾವಣಾ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದರು. ಚರ್ಕಿ ದಾದ್ರಿಯಲ್ಲಿ ಬಿಜೆಪಿ ಅಭ್ಯರ್ಥಿ, ಕುಸ್ತಿಪಟು ಬಬಿತಾ ಫೋಗಟ್ ಪರ ಪ್ರಚಾರ ನಡೆಸುತ್ತಾ ಈ ಮಾತುಗಳನ್ನಾಡಿದ ಮೋದಿ, “ದಂಗಲ್ ಸಿನಿಮಾವನ್ನು ಚೀನ ಅಧ್ಯಕ್ಷರೂ ವೀಕ್ಷಿಸಿದ್ದಾರೆ ಎಂಬುದನ್ನು ಕೇಳಿ ಸಂತೋಷವಾಯಿತು. ನಮ್ಮ ಹೆಣ್ಣುಮಕ್ಕಳು ಯಾರಿಗೂ ಕಮ್ಮಿಯಿಲ್ಲ. ಈ ದೀಪಾವಳಿಯನ್ನು ನಮ್ಮ ಪುತ್ರಿಯರಿಗಾಗಿಯೇ ಅರ್ಪಿಸಿ’ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ಗೆ ಪಾಠ ಕಲಿಸಿ: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಕುರಿತು ಕಾಂಗ್ರೆಸ್ ನಾಯಕರು ವಿದೇಶಗಳಿಗೆ ಹೋಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಅಸೆಂಬ್ಲಿ ಚುನಾವಣೆಯಲ್ಲಿ ಇವರಿಗೆ ಮತದಾರರೇ ತಕ್ಕ ಪಾಠ ಕಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ನಿಮಗೆ ಎಷ್ಟು ಬೇಕೋ ಅಷ್ಟು ಮೋದಿಯನ್ನು ತೆಗಳಿ. ಬೇಕಿದ್ದರೆ ಬ್ಯಾಂಕಾಕ್, ಥಾಯ್ಲೆಂಡ್, ವಿಯೆಟ್ನಾಂನಂಥ ದೇಶಗಳಿಂದಲೂ ಬೈಗುಳಗಳನ್ನು ಆಮದು ಮಾಡಿಕೊಳ್ಳಿ. ಮೋದಿ ವಿರುದ್ಧ ಏನೇ ಮಾತಾಡಿದರೂ ಬೇಸರವಿಲ್ಲ. ಆದರೆ, ಭಾರತದ ವಿರುದ್ಧ ಕಿಡಿಕಾರುವುದನ್ನು ನಿಲ್ಲಿಸಿ’ ಎಂದು ಮೋದಿ ಗುಡುಗಿದ್ದಾರೆ.
ಕೇಂದ್ರದ ವಿರುದ್ಧ ಕಿಡಿ: ಇನ್ನು ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ರ್ಯಾಲಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನೋಟು ಅಮಾನ್ಯ, ಜಿಎಸ್ಟಿಯಂಥ ಕೆಟ್ಟ ಆರ್ಥಿಕ ನೀತಿ ಗಳಿಂದಾಗಿ ದೇಶದಲ್ಲಿ ನಿರುದ್ಯೋಗ ತಾಂಡವವಾಡತೊಡಗಿದೆ. ಮೋದಿ ಸರಕಾರ ಅಧಿಕಾರದಲ್ಲಿ ಇರುವವರೆಗೂ ನಿರುದ್ಯೋಗ ಸಮಸ್ಯೆ ಪರಿಹಾರವಾಗುವು ದಿಲ್ಲ’ ಎಂದಿದ್ದಾರೆ. ಇದೇ ವೇಳೆ, ಮಹಾ ರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?