ಭೋಗಾಲಿ ಬಿಹು ಹಬ್ಬಕ್ಕೆ ಅಸ್ಸಾಂ ಸಿಎಂಗೆ ಉಡುಗೊರೆಯಾಗಿ ಬಂತು 14 ಕೆಜಿ ತೂಕದ ಮೀನು


Team Udayavani, Jan 14, 2023, 5:16 PM IST

Assam CM Himanta Biswa Sarma gets 14-kg fish as gift

ಡಿಸ್ಪುರ್: ಅಸ್ಸಾಂ ರಾಜ್ಯ ಇಂದು ಭೋಗಾಲಿ ಬಿಹು ಹಬ್ಬದ ಸಂತಸದಲ್ಲಿದೆ. ಕರ್ನಾಟಕದ ಸಂಕ್ರಾಂತಿ ಹಬ್ಬದಂತೆ ಅಸ್ಸಾಮಿಗರು ಸಮೃದ್ಧಿಯ ಹಬ್ಬವಾಗಿ ಭೋಗಾಲಿ ಬಿಹುವನ್ನು ಆಚರಿಸುತ್ತಾರೆ. ಶನಿವಾರ ಸಂಜೆಯಿಂದ ಮೂರು ದಿನಗಳ ಕಾಲ ನಡೆಯುವ ಹಬ್ಬಕ್ಕೆ ಜನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಮುದಾಯಗಳು ತಾವು ಕೊಯ್ದ ಸುಗ್ಗಿಯನ್ನು ಆಚರಿಸಲು ಒಟ್ಟಿಗೆ ಅಡುಗೆ ಮಾಡಿ ತಿನ್ನುವುದರಿಂದ (ಉರುಕ) ಇದು ಪ್ರಾರಂಭವಾಗುತ್ತದೆ.

ಹಬ್ಬದ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಾಗರಿಕರು ಮತ್ತು ಅಧಿಕಾರಿಗಳಿಂದ ಹಬ್ಬದ ಉಡುಗೊರೆಗಳನ್ನು ಸ್ವೀಕರಿಸಿದರು. ಸಿಎಂ ಶರ್ಮಾ ಅವರಿಗೆ 14 ಕೆಜಿ ತೂಕದ ಮೀನು ಉಡುಗೊರೆಯಾಗಿ ಬಂದಿದೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಉರುಕದ ಸಂದರ್ಭದಲ್ಲಿ ಜಪಿ ಮತ್ತು ಝೋರೈ ಎಂಬ ಎರಡು ರಾಹು ಮೀನುಗಳನ್ನು ನನಗೆ ಉಡುಗೊರೆಯಾಗಿ ನೀಡಿದ ಬಿಜೆಪಿ ಅಸ್ಸಾಂ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತಬಿಬುರ್ ರೆಹಮಾನ್ ಮತ್ತು ಮುಸ್ತಫಾ ಅಲಿ ಅವರಿಗೆ ಧನ್ಯವಾದಗಳು. ಫಟಾಸಿಲ್ ಅಂಬಾರಿ ನಿವಾಸಿ ಪ್ರೀತಮ್ ಶರ್ಮಾ ಅವರಿಂದ 12 ಕೆಜಿ ಸಿಟೋಲ್ ಮೀನನ್ನು ಸ್ವೀಕರಿಸಲು ಸಂತೋಷವಾಗಿದೆ. ಮುಕುಲ್ ಅಲಿಯಿಂದ 4.5 ಕೆಜಿ ಸಿಟೋಲ್ ಮೀನು ಮತ್ತು ಸಲ್ಮಾನ್ ಹಿಂದ್ ಮತ್ತು ಕುಟುಂಬ ಮತ್ತು ಅಬು ಹನೀಫ್ ಚೌಧರಿಯಿಂದ 14 ಕೆಜಿ ಬೋರಾಲಿ ಮೀನು ಸ್ವೀಕರಿಸಿದ್ದೇನೆ. ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಭೋಗಾಲಿ ಬಿಹು ಹಬ್ಬದ ಶುಭಾಶಯ ಕೋರುತ್ತೇನೆ” ಎಂದು ಶರ್ಮಾ ಹೇಳಿದ್ದಾರೆ.

ಅಸ್ಸಾಂ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರುಜ್ಯೋತಿ ದಾಸ್ ಅವರಿಂದ ಸಿಎಂ ಶರ್ಮಾ ಅವರು 13.5 ಕೆಜಿ ಭೋಕುವಾ ಮೀನು, 10.5 ಕೆಜಿ ಸಿಟೋಲ್ ಮೀನು ಮತ್ತು ಚುಂಗಾ ಪಿತಾಸ್ ಪಡೆದರು. ಅವರು ಸ್ಥಳೀಯ ಮುಖಂಡರಿಂದ ಸಿಹಿತಿಂಡಿಗಳು, ಪೀಠಗಳು, ಕೆನೆ, ಮೊಸರು, ಬೆಲ್ಲ ಮತ್ತು ಸ್ಥಳೀಯವಾಗಿ ತಯಾರಿಸಿದ ಸಾಸಿವೆ ಎಣ್ಣೆ ಸೇರಿದಂತೆ ಹಬ್ಬದ ಉಡುಗೊರೆಗಳನ್ನು ಪಡೆದರು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.