ಭೋಗಾಲಿ ಬಿಹು ಹಬ್ಬಕ್ಕೆ ಅಸ್ಸಾಂ ಸಿಎಂಗೆ ಉಡುಗೊರೆಯಾಗಿ ಬಂತು 14 ಕೆಜಿ ತೂಕದ ಮೀನು
Team Udayavani, Jan 14, 2023, 5:16 PM IST
ಡಿಸ್ಪುರ್: ಅಸ್ಸಾಂ ರಾಜ್ಯ ಇಂದು ಭೋಗಾಲಿ ಬಿಹು ಹಬ್ಬದ ಸಂತಸದಲ್ಲಿದೆ. ಕರ್ನಾಟಕದ ಸಂಕ್ರಾಂತಿ ಹಬ್ಬದಂತೆ ಅಸ್ಸಾಮಿಗರು ಸಮೃದ್ಧಿಯ ಹಬ್ಬವಾಗಿ ಭೋಗಾಲಿ ಬಿಹುವನ್ನು ಆಚರಿಸುತ್ತಾರೆ. ಶನಿವಾರ ಸಂಜೆಯಿಂದ ಮೂರು ದಿನಗಳ ಕಾಲ ನಡೆಯುವ ಹಬ್ಬಕ್ಕೆ ಜನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಮುದಾಯಗಳು ತಾವು ಕೊಯ್ದ ಸುಗ್ಗಿಯನ್ನು ಆಚರಿಸಲು ಒಟ್ಟಿಗೆ ಅಡುಗೆ ಮಾಡಿ ತಿನ್ನುವುದರಿಂದ (ಉರುಕ) ಇದು ಪ್ರಾರಂಭವಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಾಗರಿಕರು ಮತ್ತು ಅಧಿಕಾರಿಗಳಿಂದ ಹಬ್ಬದ ಉಡುಗೊರೆಗಳನ್ನು ಸ್ವೀಕರಿಸಿದರು. ಸಿಎಂ ಶರ್ಮಾ ಅವರಿಗೆ 14 ಕೆಜಿ ತೂಕದ ಮೀನು ಉಡುಗೊರೆಯಾಗಿ ಬಂದಿದೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ಉರುಕದ ಸಂದರ್ಭದಲ್ಲಿ ಜಪಿ ಮತ್ತು ಝೋರೈ ಎಂಬ ಎರಡು ರಾಹು ಮೀನುಗಳನ್ನು ನನಗೆ ಉಡುಗೊರೆಯಾಗಿ ನೀಡಿದ ಬಿಜೆಪಿ ಅಸ್ಸಾಂ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತಬಿಬುರ್ ರೆಹಮಾನ್ ಮತ್ತು ಮುಸ್ತಫಾ ಅಲಿ ಅವರಿಗೆ ಧನ್ಯವಾದಗಳು. ಫಟಾಸಿಲ್ ಅಂಬಾರಿ ನಿವಾಸಿ ಪ್ರೀತಮ್ ಶರ್ಮಾ ಅವರಿಂದ 12 ಕೆಜಿ ಸಿಟೋಲ್ ಮೀನನ್ನು ಸ್ವೀಕರಿಸಲು ಸಂತೋಷವಾಗಿದೆ. ಮುಕುಲ್ ಅಲಿಯಿಂದ 4.5 ಕೆಜಿ ಸಿಟೋಲ್ ಮೀನು ಮತ್ತು ಸಲ್ಮಾನ್ ಹಿಂದ್ ಮತ್ತು ಕುಟುಂಬ ಮತ್ತು ಅಬು ಹನೀಫ್ ಚೌಧರಿಯಿಂದ 14 ಕೆಜಿ ಬೋರಾಲಿ ಮೀನು ಸ್ವೀಕರಿಸಿದ್ದೇನೆ. ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಭೋಗಾಲಿ ಬಿಹು ಹಬ್ಬದ ಶುಭಾಶಯ ಕೋರುತ್ತೇನೆ” ಎಂದು ಶರ್ಮಾ ಹೇಳಿದ್ದಾರೆ.
Thankful to @BJP4Assam Minority Morcha General Secretary Tabibur Rahman and Mustafa Ali for gifting me two Rahu fishes, Japi and Xorai on the occasion of Uruka.
Also happy to receive a 12-kg Sitol fish from Fatasil Ambari resident Shri Pritam Sarma. pic.twitter.com/0YyV8eyFTG
— Himanta Biswa Sarma (@himantabiswa) January 14, 2023
ಅಸ್ಸಾಂ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರುಜ್ಯೋತಿ ದಾಸ್ ಅವರಿಂದ ಸಿಎಂ ಶರ್ಮಾ ಅವರು 13.5 ಕೆಜಿ ಭೋಕುವಾ ಮೀನು, 10.5 ಕೆಜಿ ಸಿಟೋಲ್ ಮೀನು ಮತ್ತು ಚುಂಗಾ ಪಿತಾಸ್ ಪಡೆದರು. ಅವರು ಸ್ಥಳೀಯ ಮುಖಂಡರಿಂದ ಸಿಹಿತಿಂಡಿಗಳು, ಪೀಠಗಳು, ಕೆನೆ, ಮೊಸರು, ಬೆಲ್ಲ ಮತ್ತು ಸ್ಥಳೀಯವಾಗಿ ತಯಾರಿಸಿದ ಸಾಸಿವೆ ಎಣ್ಣೆ ಸೇರಿದಂತೆ ಹಬ್ಬದ ಉಡುಗೊರೆಗಳನ್ನು ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು