ಪಾಕಿಸ್ತಾನ, ಬಾಂಗ್ಲಾದೇಶವನ್ನು ಜೋಡಿಸಿ: ಕಾಂಗ್ರೆಸ್ ಗೆ ಹಿಮಂತ ಬಿಸ್ವಾ ಶರ್ಮಾ ಸವಾಲು
ನೆಲಸಮಗೊಂಡ ಮದರಸಾಗಳೆಲ್ಲ ಅಲ್ ಖೈದಾ ಕಚೇರಿಗಳು ಎಂದ ಅಸ್ಸಾಂ ಸಿಎಂ
Team Udayavani, Sep 7, 2022, 2:25 PM IST
ದಿಸ್ಪುರ್: ‘‘ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶವನ್ನು ಸಂಯೋಜಿಸಲು ಪ್ರಯತ್ನಿಸಿ ಮತ್ತು ಅಖಂಡ ಭಾರತಕ್ಕಾಗಿ ಕೆಲಸ ಮಾಡಿ” ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ಗೆ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಭಾರತ ಅಖಂಡವಾಗಿದ್ದು, ನಾವು ಒಂದು ರಾಷ್ಟ್ರ. ಕಾಂಗ್ರೆಸ್ 1947 ರಲ್ಲಿ ಭಾರತವನ್ನು ಛಿದ್ರಗೊಳಿಸಿತು. ರಾಹುಲ್ ಗಾಂಧಿಯವರು ತಮ್ಮ ತಾತ ತಪ್ಪು ಮಾಡಿದ್ದಾರೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ” ಎಂದು ಹೇಳಿದರು.
ಅಲ್ ಖೈದಾ ಕಚೇರಿ
ಅಸ್ಸಾಂ ನಲ್ಲಿ ನೆಲಸಮಗೊಂಡ ಮದರಸಗಳೆಲ್ಲ ಮದರಸಾಗಳಾಗಿರಲಿಲ್ಲ ಅಲ್ ಖೈದಾ ಕಚೇರಿಗಳಾಗಿದ್ದವು. ನಾವು 2 ರಿಂದ 3 ಮದರಸಗಳನ್ನು ಕೆಡವಿದ್ದೇವೆ. ಅಲ್ ಖೈದಾದ ಕೆಲಸ ನಡೆಯುವ ಮದರಸಾ ಬೇಡ ಎಂದು ಮುಸ್ಲಿಂ ಸಮುದಾಯದವರೇ ಕೆಡವಲು ಬರುತ್ತಿದ್ದಾರೆ, ಮದರಸಾದ ಸ್ವರೂಪವೇ ಬದಲಾಗುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.
ಜೈರಾಮ್ ರಮೇಶ್ ಯಾರು?
ಮೊದಲು ಹೇಳಿ, ಜೈರಾಮ್ ರಮೇಶ್ ಯಾರು? ಅವರು ಅಸ್ಸಾಂನಲ್ಲಿ ವಾಸಿಸುವವರೇ ? ಅವರು ಯಾರು? ನನಗೆ ಗೊತ್ತಿಲ್ಲ. ಕಾಂಗ್ರೆಸ್ ನಾಯಕರ ಹೆಸರು ಯಾರಿಗೆ ನೆನಪಾಗುತ್ತದೆ? ನಾನು ಕಾಂಗ್ರೆಸ್ನಲ್ಲಿದ್ದಾಗ ಅಂತಹ ಹೆಸರಿನ ವ್ಯಕ್ತಿಯೊಂದಿಗೆ ಎಂದಿಗೂ ಹತ್ತಿರವಾಗಿರಲಿಲ್ಲ. ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಬಾಲಿಶ, ಅಪಕ್ವ ಮತ್ತು ಅವರು ತಮ್ಮ ಹೊಸ ಯಜಮಾನರಿಗೆ ನಿಷ್ಠೆಯನ್ನು ಸಾಬೀತುಪಡಿಸಲು ಮಾತ್ರ ಹೇಳಿಕೆಗಳನ್ನು ನೀಡುತ್ತಾರೆ ಎಂದು ಅಸ್ಸಾಂ ಸಿಎಂ ಹೇಳಿಕೆಗೆ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ