ಆಧುನಿಕ ‘ವಸುದೇವ’!
ಅಸ್ಸಾಂ ನೆರೆಯಲ್ಲಿ ಕಂಡ ಮಾನವೀಯ ಮುಖಗಳು
Team Udayavani, Jul 19, 2019, 5:04 PM IST
ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಹಲವಾರು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದೆ. ಈ ಭಾಗದಲ್ಲಿರುವ ಗ್ರಾಮಗಳಿಗೇ ಗ್ರಾಮಗಳೇ ಮುಳುಗಡೆಯಾಗಿವೆ. ಒಂದು ಕಡೆಯಲ್ಲಿ ಜಗತ್ಪಸ್ರಿದ್ಧ ಕಾಂಜಿರಂಗ ಸಹಿತ ಹಲವಾರು ಉದ್ಯಾನವನಗಳು ಮುಳುಗಡೆಯಾಗಿ ಪ್ರಾಣಿ ಸಂಕುಲ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇನ್ನೊಂದೆಡೆಯಲ್ಲಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಗಳಲ್ಲಿನ ಗ್ರಾಮಸ್ಥರು ಉಟ್ಟಬಟ್ಟಯಲ್ಲೇ ತಮ್ಮ ಮನೆ, ಜಮೀನುಗಳನ್ನು ತೊರೆದು ಸಾಕುಪ್ರಾಣಿಗಳ ಸಹಿತ ಸುರಕ್ಷಿತ ಸ್ಥಳಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.
ನಿನ್ನೆಯಷ್ಟೇ ಅಭಯಾರಣ್ಯದಿಂದ ತಪ್ಪಿಸಿಕೊಂಡು ಬಂದಿದ್ದ ಹುಲಿಯೊಂದು ಸಮೀಪದ ಮನೆಯ ಕೋಣೆಯೊಳಗೆ ನುಗ್ಗಿ ಮಂಚದ ಮೇಲೆ ಮಲಗಿದ್ದ ಚಿತ್ರವೊಂದು ‘ವೈಲ್ಡ್ ಲೈಫ್ ಆಫ್ ಇಂಡಿಯಾ’ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಗೊಂಡು ಎಲ್ಲರ ಗಮನ ಸೆಳೆದಿತ್ತು.
ಇವತ್ತು ಇನ್ನೊಂದು ಚಿತ್ರ ಆ ಭಾಗದ ಪ್ರವಾಹ ಪರಿಸ್ಥಿತಿಗೆ ನಿದರ್ಶನವೆಂಬಂತೆ ತೋರುತ್ತಿದೆ. ವ್ಯಕ್ತಿಯೊಬ್ಬರು ಒಂದು ಮಗುವನ್ನು ಬಟ್ಟೆ ಹಾಸಿದ ಬೆತ್ತದ ಬುಟ್ಟಿಯಲ್ಲಿ ಇರಿಸಿಕೊಂಡು ಎದೆಮಟ್ಟದ ನೆರೆನೀರಿನಲ್ಲಿ ಸುರಕ್ಷಿತ ಸ್ಥಳದತ್ತ ಸಾಗುತ್ತಿರುವ ಚಿತ್ರ ಮನಕಲುಕುವಂತಿದೆ.
ಅಂದು ದ್ವಾಪರ ಯುಗದಲ್ಲಿ ಕಂಸನ ಸೆರೆಯಲ್ಲಿ ಜನಿಸಿದ ತನ್ನ ಮಗುವನ್ನು ಶ್ರೀ ಕೃಷ್ಣನ ತಂದೆಯಾದ ವಸುದೇವ ರಾತೋರಾತ್ರಿ ಸುರಿಯುತ್ತಿದ್ದ ಜಡಿಮಳೆಯನ್ನೂ ಲೆಕ್ಕಿಸದೇ ಬುಟ್ಟಿಯಲ್ಲಿರಿಸಿ ತಲೆಮೇಲೆ ಇರಿಸಿಕೊಂಡು ಉಕ್ಕಿಹರಿಯುತ್ತಿದ್ದ ಯಮುನಾ ನದಿಯನ್ನು ದಾಟಿ ದ್ವಾರಕೆಯತ್ತ ನಡೆದ ಎಂಬ ಪುರಾಣದ ಕಥೆ ಈ ಘಟನೆಯನ್ನು ನೋಡಿದಾಗ ಮತ್ತೆ ನೆನಪಾಗುತ್ತಿದೆ.
ಆದರೆ ಬುಟ್ಟಿಯಲ್ಲಿ ತಣ್ಣಗೆ ಕುಳಿತ ಆ ಮಗುವಿಗೂ ಮತ್ತು ಅದನ್ನು ತಲೆ ಮೇಲೆ ಹೊತ್ತುಕೊಂಡು ಪ್ರವಾಹದ ನೀರಲ್ಲಿ ನಡೆಯುತ್ತಿರುವ ವ್ಯಕ್ತಿಗೂ ಇರುವ ಸಂಬಂಧದ ಕುರಿತಾಗಿ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಏನೇ ಆದರೂ ಬುಟ್ಟಿಯಲ್ಲಿ ಕುಳಿತಿರುವ ಮಗು ಕೃಷ್ಣನಂತೆಯೂ ಮತ್ತದನ್ನು ತಲೆ ಮೇಲೆ ಹೊತ್ತುಕೊಂಡು ನೀರಿನಲ್ಲಿ ಸಾಗುತ್ತಿರುವ ಆ ವ್ಯಕ್ತಿ ಈ ಕಾಲದ ವಸುದೇವನಂತೆಯೂ ನಮಗೆ ಕಂಡಲ್ಲಿ ಆಶ್ಚರ್ಯವಿಲ್ಲವಲ್ಲವೇ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ