ಕಬ್ಬಿಣದ ರಾಡ್ ತುಂಬಿದ್ದ ಟ್ರಕ್ಕಿಗೆ ಆಟೋ ಢಿಕ್ಕಿ; ಚಾಲಕ ಸಾವು
Team Udayavani, Sep 14, 2017, 12:01 PM IST
ಹೊಸದಿಲ್ಲಿ : ಕಬ್ಬಿಣದ ರಾಡುಗಳನ್ನು ಹೇರಿಕೊಂಡು ಸಾಗುತ್ತಿದ್ದ ಟ್ರಕ್ ಒಂದಕ್ಕೆ ಆಟೋ ರಿಕ್ಷಾ ಒಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಆಟೋ ಚಾಲಕನ ದೇಹವನ್ನು ರಾಡುಗಳು ಹೊಕ್ಕು ಆತನ ದಾರುಣ ಸಾವಿಗೆ ಕಾರಣವಾದ ಘಟನೆ ವರದಿಯಾಗಿದೆ.
ದಿಲ್ಲಿಯ ನಿಜಾಮುದ್ದೀನ್ ಸೇತುವೆಯ ಮೇಲೆ ನಸುಕಿನ 4.30ರ ಹೊತ್ತಿಗೆ ಈ ದುರ್ಘಟನೆ ನಡೆಯಿತು. ಕಬ್ಬಿಣದ ರಾಡುಗಳನ್ನು ಹೇರಿಕೊಂಡಿದ್ದ ಹದಿನಾರು ಚಕ್ರಗಳ ಟ್ರಕ್ ಮುಂದುಗಡೆ ಸಾಗುತ್ತಿತ್ತು. ರಾಡುಗಳ ಇರುವಿಕೆ ಮತ್ತು ಉದ್ದವನ್ನು ಅಂದಾಜಿಸಲು ಅನುಕೂಲಿಸುವ ಕೆಂಬಾವುಟಗಳನ್ನು ಅಥವಾ ಕೆಂಪು ದೀಪವನ್ನು ಟ್ರಕ್ಕಿಗೆ ಹಾಕಿರಲಿಲ್ಲ.
ಟ್ರಕ್ಕಿನ ಹಿಂಬದಿಯಿಂದ ಬರುತ್ತಿದ್ದ ಆಟೋ ಚಾಲಕನಿಗೆ ಕಬ್ಬಿಣದ ರಾಡುಗಳು ಉದ್ದವನ್ನು ತಿಳಿಯಲಾಗಲಿಲ್ಲ. ಹಾಗಾಗಿ ಟ್ರಕ್ಕಿನಿಂದ ಹೊರಚಾಚಿಕೊಂಡಿದ್ದ ಕಬ್ಬಿಣದ ರಾಡುಗಳಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದಾಗ ಚಾಲಕನ ದೇಹವನ್ನು ರಾಡುಗಳು ಹೊಕ್ಕು ಆತನ ದಾರುಣ ಸಾವಿಗೆ ಕಾರಣವಾದವು.
ಸ್ಥಳದಲ್ಲೇ ಸಾವಪ್ಪಿರುವ ಆಟೋ ಚಾಲಕನನ್ನು 40ರ ಹರೆಯದ ನರೇಶ್ ಕುಮಾರ್ ಎಂದು ಗುರುತಿಸಲಾಗಿದೆ. ನೋಯ್ಡಾ ಕಡೆಗೆ ಹೋಗುತ್ತಿದ್ದ ಆತನ ಆಟೋದಲ್ಲಿ ಇಬ್ಬರು ಪ್ರಯಾಣಿಕರೂ ಇದ್ದು ಅವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು