ವಿದೇಶ ಪ್ರಯಾಣಕ್ಕೆ ತಡೆ
Team Udayavani, May 26, 2019, 6:00 AM IST
ಮುಂಬಯಿ: ನಷ್ಟದ ಸುಳಿಗೆ ಸಿಲುಕಿರುವ ಜೆಟ್ ಏರ್ವೇಸ್ನ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಹಾಗೂ ಅವರ ಪತ್ನಿ ಅನಿತಾ ಗೋಯೆಲ್ಗೆ ವಿದೇಶ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದ ವಲಸೆ ಪ್ರಾಧಿಕಾರ ಅನುಮತಿ ನೀಡಿಲ್ಲ.
ಈ ಮೂಲಕ ಮತ್ತೂಂದು ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಪ್ರಕರಣವಾಗಿ ಜೆಟ್ ಏರ್ವೆàಸ್ ಪ್ರಕರಣ ಪರಿವರ್ತನೆಯಾಗುವುದನ್ನು ತಡೆಯಲಾಗಿದೆ. ಪತಿ, ಪತ್ನಿ ದುಬೈಗೆ ತೆರಳುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಇವರು ತೆರಳಬೇಕಿತ್ತಾದರೂ, ವಿಮಾನಕ್ಕೆ ಏರಿಸಿದ ಲಗೇಜ್ ಅನ್ನು ಅನಂತರ ವಾಪಸ್ ಕಳುಹಿಸಲಾಗಿದೆ.