ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವ
ಬೆಳಗಿದವು 12 ಲಕ್ಷ ಹಣತೆಗಳು; ದೇಶದ ಎಲ್ಲೆಲ್ಲೂ ದೀಪಾವಳಿ ಮೆರುಗು
Team Udayavani, Nov 4, 2021, 6:22 AM IST
ಹೊಸದಿಲ್ಲಿ: ದೇಶಾದ್ಯಂತ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದ್ದು, ಕೇಂದ್ರ ನಾಯಕರು ಹಾಗೂ ರಾಜ್ಯ ನಾಯಕರೂ ಕೂಡ ಹಬ್ಬಕ್ಕಾಗಿ ವಿಶೇಷ ಆಚರಣೆಗಳಲ್ಲಿ ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ದೀಪ ಬೆಳಗುವುದರಿಂದ ಹಿಡಿದು, ಪ್ರಧಾನಿಯವರು ಯೋಧರೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದೆಲ್ಲವೂ ಈ ಬಾರಿಯ ವಿಶೇಷವಾಗಿದೆ.
ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವಕ್ಕೆ ಚಾಲನೆ ನೀಡಲಾಗಿದೆ. ಸರಯೂ ನದಿ ತೀರದಲ್ಲಿ 9 ಲಕ್ಷ ಸೇರಿದಂತೆ ಅಯೋಧ್ಯೆಯಲ್ಲಿ ಈ ವರ್ಷ 12 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ರಾಮ್ಲೀಲಾ, 3ಡಿ ಹೊಲೋ ಗ್ರಫಿಕ್ ,ಲೇಸರ್ ಶೋ, ಸುಡುಮದ್ದುಗಳು ಸೇರಿದಂತೆ ಅನೇಕ ರೀತಿಯ ವಿಶೇಷತೆಗಳನ್ನು ಈ ಬಾರಿ ಅಯೋಧ್ಯೆಯಲ್ಲಿ ಕಾಣಬಹುದು.
ಯೋಧರೊಂದಿಗೆ ಮೋದಿ ದೀಪಾವಳಿ: ಪ್ರಧಾನಿ ನರೇಂದ್ರ ಮೋದಿ ಯವರು ಪ್ರತೀ ಬಾರಿಯಂತೆ ಈ ಬಾರಿ ಯೂ ದೀಪಾವಳಿ ಹಬ್ಬವನ್ನು ಯೋಧರೊಂದಿಗೆ ಆಚರಿಸಲಿದ್ದಾರೆ. ಅವರು ಗುರುವಾರ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಯೋಧರೊಂ ದಿಗೆ ದೀಪದ ಹಬ್ಬ ಆಚರಿಸಲಿದ್ದಾರೆ.
ಇದನ್ನೂ ಓದಿ:ಕೇದರಾನಾಥಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್ ಫುಲ್ ಟ್ರೋಲ್
ಮಂದಿರದ ಪರ ಧ್ವನಿಯೆತ್ತುವುದು ಅಪರಾಧವಾಗಿತ್ತು: ಯೋಗಿ
31 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಭಕ್ತರು, ಕರಸೇವಕರ ಮೇಲೆ ಗುಂಡು ಹಾರಿಸಲಾಗಿತ್ತು. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವುದು ಅಪರಾಧವಾಗಿತ್ತು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ದೀಪೋತ್ಸವದಲ್ಲಿ ಮಾತನಾಡಿದ ಅವರು, “ಪ್ರಜಾಪ್ರಭುತ್ವ ಹಾಗೂ ಜನರ ಶಕ್ತಿಯಿಂದಾಗಿ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ್ದ ಜನರೇ ಈಗ ಮಂಡಿಯೂರುವಂತಾಗಿದೆ. ನೀವು ನಿಮ್ಮ ಈ ಶಕ್ತಿಯ ಪ್ರದರ್ಶನವನ್ನು ಮುಂದುವರಿಸಿದ್ದೇ ಆದಲ್ಲಿ, ಅವರು ಮತ್ತು ಅವರ ಕುಟುಂಬ ಮುಂದಿನ ಕರಸೇವೆಗೆ ಸರತಿಯಲ್ಲಿ ನಿಲ್ಲಲಿದೆ. ಮುಂದಿನ ಕರಸೇವೆಯ ವೇಳೆ ಬುಲೆಟ್ ಅಲ್ಲ, ಬದಲಿಗೆ ಶ್ರೀರಾಮ ಮತ್ತು ಶ್ರೀಕೃಷ್ಣನ ಅನುಯಾಯಿಗಳ ಮೇಲೆ ಪುಷ್ಪಮಳೆ ಸುರಿಸಲಾಗುವುದು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
MUST WATCH
ಹೊಸ ಸೇರ್ಪಡೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ