ಆಯುಷ್ಮಾನ್ ವಿಸ್ತರಣೆ ; ಎಲ್ಲ ಆರೋಗ್ಯ ವಿಮೆಗಳೂ ಆಯುಷ್ಮಾನ್ನಲ್ಲಿ ವಿಲೀನ
Team Udayavani, Aug 15, 2020, 6:35 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಎಲ್ಲ ವರ್ಗದವರಿಗೆ ವಿಸ್ತರಿಸಲು ಕೇಂದ್ರ ಸರಕಾರ ಮುಂದಾಗಿದೆ. ದೇಶದ 10 ಕೋಟಿ ಬಡ ಕುಟುಂಬಗಳ 53 ಕೋಟಿ ಮಂದಿಗೆ ಮಾತ್ರ ಈ ವಿಮೆಯ ಸೌಲಭ್ಯ ಸಿಗುತ್ತಿತ್ತು. ಈಗ ಮಧ್ಯಮ ವರ್ಗ ಮತ್ತು ಬಡವರ ಮಧ್ಯೆ ಇರುವ ಹೊಸ ವರ್ಗವೊಂದನ್ನು ಗುರುತಿಸಿ, ಇವರಿಗೂ ವಿಮಾ ಸೌಲಭ್ಯ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ವರ್ಗವನ್ನು “ದಿ ಮಿಸ್ಸಿಂಗ್ ಮಿಡಲ್’ ಎಂದು ಕರೆದು ಸೌಕರ್ಯ ನೀಡುವುದು ಕೇಂದ್ರ ಸರಕಾರದ ಉದ್ದೇಶ.
ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ)ದ ಸಭೆಯಲ್ಲಿ “ವಂಚಿತ ಮಧ್ಯಮ ವರ್ಗ’ಕ್ಕೆ ಯೋಜನೆ ವಿಸ್ತರಿಸುವ ಪ್ರಯೋಗಾತ್ಮಕ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಇತರೆಲ್ಲ ಆರೋಗ್ಯ ವಿಮೆ ವಿಲೀನ
ಇದಲ್ಲದೆ ಕೇಂದ್ರ ಸರಕಾರ ಈ ಹಿಂದೆ ಜಾರಿ ಮಾಡಿದ್ದ ಎಲ್ಲ ಆರೋಗ್ಯ ವಿಮೆಗಳನ್ನು “ಆಯುಷ್ಮಾನ್ ಭಾರತ್- ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ’ ಅಡಿಯಲ್ಲಿ ವಿಲೀನ ಗೊಳಿಸಲು ನಿರ್ಧರಿಸಲಾಗಿದೆ.
“ಮಿಸ್ಸಿಂಗ್ ಮಿಡಲ್’ ಯಾರು?
ಎಂಎಸ್ಎಂಇ ವಲಯದ ನೌಕರರು, ಅನೌಪಚಾರಿಕ ವಲಯದ ಕಾರ್ಮಿಕರು, ಸ್ವಂತ ಉದ್ಯೋಗಿಗಳು, ವೃತ್ತಿಪರರು, ಕಟ್ಟಡ ನಿರ್ಮಾಣ ಕಾರ್ಮಿಕರು, ರಸ್ತೆ ಅಪಘಾತ ಸಂತ್ರಸ್ತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬಂದಿ, ಸರಕಾರಿ ಮತ್ತು ಗುತ್ತಿಗೆ ಸಿಬಂದಿ- ಪ್ರಮುಖವಾಗಿ ಇವರನ್ನು “ಮಿಸ್ಸಿಂಗ್ ಮಿಡಲ್’ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ.
ಪೈಲಟ್ ಯೋಜನೆ ಏಕೆ?
ಕೇಂದ್ರ ಸರಕಾರ ಈ “ವಂಚಿತ ಮಧ್ಯಮ ವರ್ಗ’ಕ್ಕೆ ಪೈಲಟ್ ಯೋಜನೆ ಮೂಲಕ ಈ ವಿಮಾ ಸೌಲಭ್ಯ ನೀಡುತ್ತಿದೆ. ಮೊದಲಿಗೆ ಇಂಥವರನ್ನು ಗುರುತಿಸಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಆದ್ಯತೆಗಳು, ವೆಚ್ಚ ಭರಿಸುವ ಸಾಮರ್ಥ್ಯ, ಇವರನ್ನು ತಲುಪುವ ಬಗೆ ಮತ್ತು ವಿತರಣೆ, ಆರೋಗ್ಯ ಸೇವೆಯ ಭಾಗಿತ್ವ, ಆರ್ಥಿಕತೆ, ಗ್ರಾಹಕರ ಪ್ರತಿಕ್ರಿಯೆಗಳನ್ನು ಆಧರಿಸಿ ಮುಂದೆ ಯೋಜನೆಯನ್ನು ವಿಸ್ತರಿಸುವ ಬಗೆಯನ್ನು ತಿಳಿದುಕೊಳ್ಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ