ಅಜಂ ಖಾನ್ ವಿರುದ್ಧ ಸಿಡಿದೆದ್ದ ಸಂಸದೆಯರು
Team Udayavani, Jul 27, 2019, 5:00 AM IST
ಹೊಸದಿಲ್ಲಿ: ಬಿಜೆಪಿ ಸದಸ್ಯೆ ರಮಾದೇವಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ವಿರುದ್ಧ ಲೋಕಸಭೆಯಲ್ಲಿ ಮಹಿಳಾ ಸಂಸದರು ಸಿಡಿದೆದ್ದಿದ್ದಾರೆ. ಪಕ್ಷಭೇದ ಮರೆತು ಖಾನ್ ಹೇಳಿಕೆಯನ್ನು ಖಂಡಿಸಿರುವ ಸಂಸದೆಯರು, ಅಜಂ ಖಾನ್ ಕೂಡಲೇ ಕ್ಷಮೆ ಯಾಚಿಸಬೇಕು ಅಥವಾ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕೊನೆಗೆ, ಕ್ಷಮೆ ಕೇಳುವಂತೆ ಸ್ಪೀಕರ್ ಅವರೇ ಅಜಂ ಖಾನ್ಗೆ ಸೂಚಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ನುಡಿದಿದ್ದು, ವಿವಾದವನ್ನು ತಣ್ಣಗಾಗಿಸಿದ್ದಾರೆ. ಗುರುವಾರ ತ್ರಿವಳಿ ತಲಾಖ್ ಮಸೂದೆ ಕುರಿತ ಚರ್ಚೆ ವೇಳೆ ಸ್ಪೀಕರ್ ಪೀಠದಲ್ಲಿದ್ದ ರಮಾದೇವಿ ಅವರನ್ನು ಉದ್ದೇಶಿಸಿ ಅಜಂ ಖಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಶುಕ್ರವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಸಂಘಮಿತ್ರ ಮೌರ್ಯ ಅವರು ಈ ವಿಚಾರವನ್ನೆತ್ತಿದ್ದು, ಇದಕ್ಕೆ ಕಾಂಗ್ರೆಸ್, ಎನ್ಸಿಪಿ, ಟಿಎಂಸಿ, ಡಿಎಂಕೆ, ಬಿಜೆಡಿ ಸಂಸದೆಯರು ಕೂಡ ಧ್ವನಿಗೂಡಿಸಿ, ಖಾನ್ಗೆ ಕಠಿನ ಸಂದೇಶ ಕಳುಹಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು. ಸಚಿವರಾದ ಸ್ಮತಿ ಇರಾನಿ, ನಿರ್ಮಲಾ ಸೀತಾರಾಮನ್ ಕೂಡ ಖಾನ್ ವಿರುದ್ಧ ಕಿಡಿಕಾರಿದರು. ಬಿಎಸ್ಪಿ ನಾಯಕಿ ಮಾಯಾವತಿ ಅವರೂ ಖಾನ್ ಹೇಳಿಕೆ ಖಂಡಿಸಿದ್ದು, ಅವರು ಸದನದಲ್ಲಷ್ಟೇ ಅಲ್ಲ, ಇಡೀ ಮಹಿಳಾ ಲೋಕಕ್ಕೇ ಕ್ಷಮೆ ಕೇಳಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ