ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದು ಬಾಬರ್ ಅಲ್ಲ!
Team Udayavani, Aug 29, 2019, 5:37 AM IST
ಹೊಸದಿಲ್ಲಿ: ಮುಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ 1528ರಲ್ಲಿ ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿಲ್ಲ. ಹೀಗಾಗಿ ಮಸೀದಿ ನಮ್ಮದು ಎಂಬ ಮುಸ್ಲಿಂ ದಾವೆದಾರರ ವಾದವೇ ಹುಸಿ ಎಂದು ಅಖೀಲ ಭಾರತೀಯ ಶ್ರೀ ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿಯ ಪರ ವಕೀಲ ಪಿ.ಎನ್.ಮಿಶ್ರಾ ಸುಪ್ರೀಂಕೋರ್ಟ್ ನಲ್ಲಿ ಬುಧವಾರ ವಾದಿಸಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ವಾದ ಮಂಡಿಸಿದ ಅವರು, ಪಿ.ಎನ್ ಮಿಶ್ರಾ, ಬಾಬರ್ನಾಮಾ, ಹೂಮಾಯೂನ್ನಾಮಾ ಹಾಗೂ ಅಕºರ್ನಾಮಾ ಸೇರಿದಂತೆ ಹಲವು ಪುಸ್ತಕಗಳನ್ನು ಉಲ್ಲೇಖೀಸಿದರು. ಬಾಬರ್ನಾಮಾ ಪುಸ್ತಕದಲ್ಲಿ ದೇಗುಲವನ್ನು ಧ್ವಂಸಗೊಳಿಸಿರುವುದಾಗಲೀ ಅಥವಾ ಬಾಬ್ರಿ ಮಸೀದಿಯನ್ನು ನಿರ್ಮಿಸಿರುವುದಾಗಲೀ ಉಲ್ಲೇಖವಾಗಿಲ್ಲ. ಅಷ್ಟೇ ಅಲ್ಲ, ಬಾಬರ್ನಿಗೆ ಮೀರ್ ಬಾಕಿ ಎಂಬ ಕಮಾಂಡರ್ ಇರಲಿಲ್ಲ ಎಂದೂ ಅವರು ಹೇಳಿದ್ದಾರೆ. ಬದಲಿಗೆ ಅಯೋಧ್ಯೆಯನ್ನು ಧ್ವಂಸಗೊಳಿಸಿದ್ದು ಹಾಗೂ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದು ಔರಂಗಜೇಬ ಎಂದು ಮಿಶ್ರಾ ವಾದಿಸಿದ್ದಾರೆ. ಔರಂಗಜೇಬ ಕಾಶಿ, ಮಥುರಾ ದೇಗುಲಗಳನ್ನು ಧ್ವಂಸಗೊಳಿಸಿದ ರೀತಿಯಲ್ಲೇ ಅಯೋಧ್ಯೆಯನ್ನೂ ಧ್ವಂಸಗೊಳಿಸಿದ್ದಾನೆ. ಹೀಗಾಗಿ ಮುಸ್ಲಿಂ ಸಮುದಾಯದ ದಾವೆಯಲ್ಲೇ ದೋಷವಿದ್ದು, ಅದನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ