‘ಮಹಾ’ ಸರಕಾರ: ಉದ್ಧವ್ ಸರಕಾರದಲ್ಲಿ ಬಾಳಾಸಾಹೇಬ್ ಮತ್ತು ಜಯಂತ್ ಪಾಟೀಲ್ ಡಿಸಿಎಂ
Team Udayavani, Nov 27, 2019, 8:48 AM IST
ಮುಂಬೈ: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರಕಾರ ಪತನವಾದ ಬೆನ್ನಲ್ಲೇ ಶಿವಸೇನೆ ನೇತೃತ್ವದ ಮೈತ್ರಿ ಸರಕಾರ ರಚನೆಗೆ ಅಖಾಡ ಸಿದ್ದವಾಗಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದು, ಡಿಸೆಂಬರ್ ಒಂದರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಬಾಳಾ ಸಾಹೇಬ್ ಥೋರಟ್ ಮತ್ತು ಜಯಂತ್ ಪಾಟೀಲ್ ಉಪಮುಖ್ಯಮಂತ್ರಿಯಾಗಲಿದ್ದಾರೆ.
ಎನ್ ಸಿಪಿ ನಾಯಕ ಮಜೀದ್ ಮೆಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಎನ್ ಸಿಪಿ ನಾಯಕ ಬಾಳಾ ಸಾಹೇಬ್ ಥೋರಟ್ ಮತ್ತು ಕಾಂಗ್ರೆಸ್ ನ ಜಯಂತ್ ಪಾಟೀಲ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದಿದ್ಧಾರೆ.
ದೇವೇಂದ್ರ ಫಡ್ನವೀಸ್ ಈ ಹಿಂದೆ ಮಹಾರಾಷ್ಟ್ರದಲ್ಲಿ ಸಾಕಷ್ಟು ತಪ್ಪಿಗಳನ್ನು ಮಾಡಿದ್ದು, ನಾವದನ್ನು ಸರಿಪಡಿಸಲಿದ್ದೇವೆ ಎಂದಿದ್ದಾರೆ.
ಇಂದು ಮುಂಜಾನೆ ಎಂಟು ಗಂಟೆಗೆ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ