ಇಲ್ಲಿ ಬಾಳೆಹಣ್ಣು ಮಾರಾಟ ಮಾಡಿದ್ರೆ ಹುಷಾರ್!
ರೈಲ್ವೇ ಸ್ವೇಷನ್ನಲ್ಲಿ ಶುಚಿತ್ವಕ್ಕಾಗಿ ಬಾಳೆಹಣ್ಣು ನಿಷೇಧ
Team Udayavani, Aug 28, 2019, 5:36 PM IST
ಲಕ್ನೋ: ಇನ್ನು ಇಲ್ಲಿ ಬಾಳೆಹಣ್ಣು ಮಾರಾಟ ಮಾಡಿದ್ರೆ ಎಚ್ಚರಿಕೆ ಎಂದು ಇಲ್ಲಿನ ಚಾರ್ಭಾಗ್ ರೈಲ್ವೇ ಸ್ಟೇಷನ್ನ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದಕ್ಕೆ ಕಾರಣ ಬಾಳೆಹಣ್ಣು ತಿಂದವರು ಅಲ್ಲೇ ಸಿಪ್ಪೆ ಎಸೆದು ಗಲೀಜು ಮಾಡುತ್ತಾರೆ ಎನ್ನುವುದು. ಬಾಳೆಹಣ್ಣು ಮಾರಾಟ ಮಾಡುವುದು ಗೊತ್ತಾದರೆ ದಂಡ ಮತ್ತು ಕಠಿನ ಕ್ರಮ ಕೈಗೊಳ್ಳವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರಂತೆ.
ಕಳೆದ ಐದಾರು ದಿನಗಳಿಂದ ನಾನು ಬಾಳೆಹಣ್ಣು ಮಾರಾಟ ಮಾಡಿಲ್ಲ. ಇಲ್ಲಿನ ಆಡಳಿತ ಅದನ್ನು ನಿಷೇಧಿಸಿದೆ. ಈ ಮೊದಲು ಇಲ್ಲಿನ ಸಾಮಾನ್ಯ ಪ್ರಯಾಣಿಕರು ಬಾಳೆಹಣ್ಣು ಖರೀದಿಸುತ್ತಿದ್ದರು. ಇತರ ಹಣ್ಣುಗಳ ಬೆಲೆ ಹೆಚ್ಚಾಗಿರುವುದರಿಂದ ಅವರು ಅದನ್ನೇ ಖರೀದಿಸುತ್ತಿದ್ದರು ಎಂದು ಹಣ್ಣಿನ ಅಂಗಡಿ ಮಾಲಕರೊಬ್ಬರು ಹೇಳಿದ್ದಾರೆ.
ಆದರೆ ಇದರ ಬಗ್ಗೆ ಪ್ರಯಾಣಿಕರೊಬ್ಬರು ಕೆಂಡ ಕಾರಿದ್ದಾರೆ. ಅತಿ ಕಡಿಮೆ ಬೆಲೆಗೆ ಸಿಗುವ ಉತ್ತಮ ಹಣ್ಣು ಎಂದರೆ ಬಾಳೆಹಣ್ಣು. ಶುಚಿತ್ವದ ಕಾರಣದಿಂದ ಅದರ ಮಾರಾಟ ನಿಷೇಧಿಸುವುದಾದರೆ ಮೊದಲು ಇಲ್ಲಿನ ಶೌಚಾಲಯ ನಿಷೇಧಿಸಬೇಕು. ಅಲ್ಲಿಂದಲೇ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ