ಎಲ್ಲಿ ಜನ್ಮ ತಳೆದರು ಶಿರ್ಡಿ ಸಾಯಿಬಾಬಾ?

ಒಂದೊಂದು ದಾಖಲೆಯಲ್ಲೂ ಒಂದೊಂದು ಮಾಹಿತಿ ; ನಿಖರ ಮಾಹಿತಿ ಇಲ್ಲದಿರುವುದೇ ವಿವಾದಕ್ಕೆ ಕಾರಣ

Team Udayavani, Jan 20, 2020, 8:25 AM IST

Sai-baba-19-01

19ನೇ ಶತಮಾನದ ಸಂತ, ಶಿರ್ಡಿ ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಇದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅವರ ಹುಟ್ಟೂರಿನ ಬಗ್ಗೆ ಅನೇಕರು ಅನೇಕ ದಾಖಲೆಗಳನ್ನು ಮುಂದಿಟ್ಟು ವಾದಿಸತೊಡಗಿದ್ದಾರೆ.

ಪರ್ಬಾನಿಯ ಪತ್ರಿ ಗ್ರಾಮಸ್ಥರು ಸಾಯಿ ನಮ್ಮೂರಲ್ಲೇ ಹುಟ್ಟಿರುವುದು ಎನ್ನುವುದಕ್ಕೆ 25 ದಾಖಲೆಗಳಿವೆ ಎನ್ನುತ್ತಿದ್ದಾರೆ. ಇನ್ನು ಬೇರೆ ಬೇರೆ ದಾಖಲೆಗಳು, ಪತ್ರಿಕೆಗಳ ವರದಿಗಳು, ಲೇಖನಗಳು ತಮ್ಮದೇ ಆದ ಪ್ರತ್ಯೇಕ ವಾದಗಳನ್ನು ಮುಂದಿಡುತ್ತಿವೆ.

ಒಟ್ಟಿನಲ್ಲಿ ಸಾಯಿಬಾಬಾರ ಜನ್ಮಸ್ಥಳ ಪತ್ರಿ ಎಂದು ಮೊದಲ ಬಾರಿಗೆ ಉಲ್ಲೇಖಗೊಂಡದ್ದು ರಾಷ್ಟ್ರಪತಿ ಕೋವಿಂದ್‌ 2017ರ ಅಕ್ಟೋಬರ್‌ನಲ್ಲಿ ಅಲ್ಲಿಗೆ ಭೇಟಿ ನೀಡಿ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾಗ. ಅನಂತರ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಪತ್ರಿಯ ಅಭಿವೃದ್ಧಿಗೆ 100 ಕೋಟಿ ರೂ. ಘೋಷಿಸುತ್ತಿದ್ದಂತೆ, ಮತ್ತೂಮ್ಮೆ ವಿವಾದ ಭುಗಿಲೆದ್ದಿದೆ.

1. ‘ಲೋಕಸತ್ತಾ’ ಪತ್ರಿಕೆಯ ವರದಿಯಲ್ಲಿ, ಸಾಯಿ ಜನ್ಮಸ್ಥಳದ ಬಗ್ಗೆ ಹಲವು ಉಲ್ಲೇಖಗಳಿವೆ. ಪರ್ಬನಿ ಜಿಲ್ಲೆಯ ಪತ್ರಿ ಗ್ರಾಮದ ನಿವಾಸಿಗಳು ಹೇಳುವ ಪ್ರಕಾರ, ಸಾಯಿಬಾಬಾ ಅಲ್ಲಿಯೇ ಜನಿಸಿದ್ದರು. ಅದಕ್ಕೆ ಅವರು ‘ಶ್ರೀ ಸಾಯಿ ಸಚ್ಚರಿತ್ರ’ ಪುಸ್ತಕದ ಎಂಟನೇ ಅಧ್ಯಾಯದಲ್ಲಿನ ಅಂಶಗಳನ್ನು ದಾಖಲೆಯಾಗಿ ನೀಡುತ್ತಾರೆ.

2. ಅವರು ತಮಿಳುನಾಡಿನಲ್ಲಿ ಹುಟ್ಟಿದ್ದರು ಎಂಬ ನಂಬಿಕೆಯೂ ಇದೆ. ಈ ವಾದದ ಪ್ರಕಾರ ಅವರ ತಾಯಿಯ ಹೆಸರು ವೈಷ್ಣವಿದೇವಿ ಮತ್ತು ತಂದೆಯ ಹೆಸರು ಅಬ್ಬುಲ್‌ ಸತ್ತಾರ್‌. ಅನಂತರದ ವರ್ಷಗಳಲ್ಲಿ ಅವರು ಶಿರ್ಡಿಗೆ ಬಂದಿದ್ದರು.

3. ‘ಶ್ರೀ ಸಾಯಿ ಲೀಲಾ ತ್ತೈಮಾಸಿಕ’ದ 1952ರ ಅಕ್ಟೋಬರ್‌-ನವೆಂಬರ್‌ ಅವಧಿಯ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಅಂಶದ ಪ್ರಕಾರ, ಸಾಯಿಬಾಬಾರ ತಂದೆ ಸತೇ ಶಾಸ್ತ್ರಿ ಮತ್ತು ತಾಯಿ ಲಕ್ಷ್ಮೀಬಾಯಿ. ತಮಿಳಿನ ಒಂದು ಅಂಶ ಈ ವಾದವನ್ನು ಪುಷ್ಟೀಕರಿಸುತ್ತದೆ.

4. ಗುಜರಾತಿ ಭಾಷೆಯಲ್ಲಿ ಪ್ರಕಟವಾಗುವ ‘ಸಾಯಿ ಸುಧಾ’ ನಿಯತಕಾಲಿಕೆಯಲ್ಲಿ, ಬಾಬಾ ಅವರು ಗುಜರಾತ್‌ ಬ್ರಾಹ್ಮಣ ಕುಟುಂಬದ ದಂಪತಿಗೆ ಜೆರುಸಲೇಮ್‌ನ ಜಾಫಾ ಗೇಟ್‌ ಎಂಬಲ್ಲಿ ಜನಿಸಿದ್ದರು ಎಂದು ಬರೆಯಲಾಗಿದೆ.

5. 1959ರಲ್ಲಿ ಸುಮನ್‌ ಸುಂದರ್‌ ಎಂಬವರು ಬರೆದ ‘ಸಾಯಿ ಲೀಲಾ’ ಪುಸ್ತಕದಲ್ಲಿನ ಮಾಹಿತಿ ಪ್ರಕಾರ, ಬಾಬಾ ಹುಟ್ಟಿದ್ದು ಪತ್ರಿಯಲ್ಲಿ. ಗಗಬಾಹು ಮತ್ತು ದೇವಗಿರಿ ಅಮ್ಮ ಎಂಬವರು ಅವರ ಹೆತ್ತವರು. ಪತ್ರಿ ಎಂಬ ಸ್ಥಳದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿದ್ದರೂ, ಅದು ಹಿಂದಿನ ಹೈದರಾಬಾದ್‌ ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು ಎಂದು ಬರೆಯಲಾಗಿದೆ.

ಶಿರ್ಡಿ ಬಂದ್‌ ಯಶಸ್ವಿ
ಸಾಯಿಬಾಬಾ ಹುಟ್ಟಿದ ಸ್ಥಳದ ಬಗ್ಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೀಡಿದ ಹೇಳಿಕೆ ಖಂಡಿಸಿ ಮಹಾರಾಷ್ಟ್ರದ ಶಿರ್ಡಿಯಲ್ಲಿ ರವಿವಾರ ಬಂದ್‌ ನಡೆಸಲಾಯಿತು. ಸಾಯಿಬಾಬಾ ದೇಗುಲ ತೆರೆದೇ ಇದ್ದರೂ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಇರಲಿಲ್ಲ.

ಸ್ಥಳೀಯ ಸಂಘಟನೆಗಳು ರ್ಯಾಲಿ ನಡೆಸಿದವು. ಶಿರ್ಡಿಯ ಲೋಕಸಭಾ ಸದಸ್ಯ-ಶಿವಸೇನೆ ನಾಯಕ ಸದಾಶಿವ ಲೊಖಾಂಡೆ ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಸಿಎಂ ಉದ್ಧವ್‌ ಠಾಕ್ರೆ ಸೋಮವಾರ ಈ ಬಗ್ಗೆ ಮುಂಬಯಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ಬಿಜೆಪಿಯ ಸ್ಥಳೀಯ ಮುಖಂಡರೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬಂದ್‌ ಯಶಸ್ವಿಯಾಗಿದೆ ಎಂದಿದ್ದಾರೆ. ಶಿರ್ಡಿಯ ಸುತ್ತುಮುತ್ತಲಿನ 25 ಗ್ರಾಮಗಳಲ್ಲಿ ಬಂದ್‌ ನಡೆದಿದೆ.

ಟಾಪ್ ನ್ಯೂಸ್

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.