ಬ್ಯಾಂಕ್ ನೌಕರರ 2ನೇ ದಿನದ ಮುಷ್ಕರ; ಸೇವೆಗಳು ತೀವ್ರ ಬಾಧಿತ
Team Udayavani, May 31, 2018, 12:01 PM IST
ಹೊಸದಿಲ್ಲಿ : ಹತ್ತು ಲಕ್ಷ ಬ್ಯಾಂಕ್ ನೌಕರರರ ಮುಷ್ಕರದ ಎರಡನೇ ದಿನವಾದ ಇಂದು ಗುರುವಾರ ಕೂಡ ದೇಶಾದ್ಯಂತ ಬ್ಯಾಂಕ್ ಸೇವೆಗಳು ತೀವ್ರವಾಗಿ ಬಾಧಿತವಾದವು.
ಬ್ಯಾಂಕ್ ಮುಷ್ಕರ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಈ ನಡುವೆ UFBU ಹೇಳಿಕೊಂಡಿದೆ. ಎಲ್ಲ ಬ್ಯಾಂಕುಗಳಲ್ಲಿ ಮತ್ತು ಅವುಗಳ ಎಲ್ಲ ಶಾಖೆಗಳಲ್ಲಿ ನೌಕರರು ಅತ್ಯುತ್ಸಾಹದಿಂದ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅದು ತಿಳಿಸಿದೆ.
ನಾಳೆ ಶುಕ್ರವಾರ ಬ್ಯಾಂಕ್ಗಳ ಕಾರ್ಯ ಕಲಾಪಗಳು ಮತ್ತೆ ಮಾಮೂಲಿಯಾಗಿ ನಡೆಯಲಿವೆ.
ಬ್ಯಾಂಕ್ ನೌಕರರ ಮಾಸಿಕ ವೇತನವನ್ನು ಕೇವಲ ಶೇ.2ರಷ್ಟು ಏರಿಸುವ ಪ್ರಸ್ತಾವವನ್ನು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ) ಮುಂದಿಟ್ಟಿರುವುದನ್ನು ಪ್ರತಿಭಟಿಸಿ ಬ್ಯಾಂಕ್ ಉದ್ಯೋಗಿಗಳು ಎರಡು ದಿನಗಳ ದೇಶ ವ್ಯಾಪಿ ಮುಷ್ಕರದಲ್ಲಿ ತೊಡಗಿದ್ದಾರೆ.
ಹಳೇ ತಲೆಮಾರಿನ ಖಾಸಗಿ ರಂಗದ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳ ನೌಕರರ ಬೆಂಬಲದಲ್ಲಿ ಇಂದು ಗುರುವಾರ ಕೂಡ ನಡೆಯುತ್ತಿರುವ ಈ ಮುಷ್ಕರ ಗ್ರಾಹಕರನ್ನು ಬಾಧಿಸುತ್ತಿವೆ.
ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ಗಳಲ್ಲಿ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಕೆಲವೇ ಕೆಲವು ಚಟುವಟಿಕೆಗಳನ್ನು ಹೊರತು ಪಡಿಸಿ, ಉಳಿದೆಲ್ಲ ಚಟುವಟಿಕೆಗಳು ಎಂದಿನಂತೆ ಮಾಮೂಲಿಯಾಗಿ ಸಾಗುತ್ತಿರುವುದಾಗಿ ವರದಿಗಳು ತಿಳಿಸಿವೆ.
ಕೇರಳ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಬ್ಯಾಂಕ್ ಮುಷ್ಕರದ ಬಿಸಿ ಗ್ರಾಹಕರನ್ನು ತೀವ್ರವಾಗಿ ತಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್