ವಧುವಿಗೆ ಬ್ಯಾಟು; ಕುಡುಕರಿಗೆ ಏಟು
Team Udayavani, May 1, 2017, 10:48 AM IST
ಭೋಪಾಲ್:ತಗೋ ತಾಯಿ ಈ ಬ್ಯಾಟು. ಗಂಡ ಏನಾದ್ರೂ ಕುಡಿದು ಬಂದು ನಿನ್ನ ಜತೆ ಜಗಳ ಆಡಿದ್ರೆ, ಇದ್ರಿಂದ ಸರಿಯಾಗಿ ನಾಲ್ಕು ಬಾರಿ ಒಳಗೆ ಕರೊRà.’ ಇದು ಮಧ್ಯ ಪ್ರದೇಶದ ಸಚಿವರೊಬ್ಬರು ನವ ವಧುಗಳಿಗೆ ಪರೋಕ್ಷವಾಗಿ ನೀಡಿದೆ ಸಲಹೆ!
ಸಹಜವಾಗಿ ಮದುವೆಯಲ್ಲಿ ವಧು-ವರರಿಗೆ ಏನು ಗಿಫ್ಟ್ ಕೊಡಬೇಕು ಅಂತ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಾರೆ. ಕೆಲವರು ವಿಭಿನ್ನವಾದ ಗಿಫ್ಟ್ ಕೊಟ್ಟು ಗಮನಸೆಳೆಯುತ್ತಾರೆ. ಆದರೆ ಮಧ್ಯ ಪ್ರದೇಶದ ಪಂಚಾಯತ್ರಾಜ್ ಸಚಿವ ಗೋಪಾಲ್ ಭಾರ್ಗವ, ಸಾಮೂಹಿಕ ವಿವಾಹ ವೊಂದರಲ್ಲಿ 700 ನವ ವಧುಗಳಿಗೆ “ಮೋಗ್ರಿ’ (ಮರದ ಬ್ಯಾಟ್) ಉಡುಗೊರೆಯಾಗಿ ನೀಡಿದ್ದಾರೆ. ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಹೆಣ್ಮಕ್ಕಳು ಬಟ್ಟೆ ತೊಳೆಯಲು “ಮೋಗ್ರಿ’ ಬಳಸುತ್ತಾರೆ.
ಸಚಿವ ಗೋಪಾಲ್ ಹೀಗೆ ನವವಧುಗಳಿಗೆ ನೀಡಿರುವ ಮರದ ಬ್ಯಾಟ್ನಲ್ಲಿ “ಕುಡುಕ ಗಂಡನನ್ನು ದಂಡಿಸಲೊಂದು ಉಡುಗೊರೆ. ಪೊಲೀಸರಿಗೆ ಪ್ರವೇಶವಿಲ್ಲ’ ಎಂದು ಬರೆದಿರುವುದು ಮತ್ತೂಂದು ವಿಶೇಷ. ಈ ಮೂಲಕ ಮಧ್ಯಪ್ರದೇಶದ ಸಚಿವ, ಗುಂಡು ಹಾಕುವ ಗಂಡಂದಿರನ್ನು ದಂಡಿಸುವ “ಸಂಪೂರ್ಣ ಸ್ವಾತಂತ್ರ್ಯ’ವನ್ನು ತಮ್ಮ ರಾಜ್ಯದ ಮಹಿಳೆಯರ ಕೈಗೆ ನೀಡಿದ್ದಾರೆ.
ಸಾಮಾನ್ಯವಾಗಿ ಬಡ ಮತ್ತು ಹಿಂದುಳಿದ ಕುಟುಂಬಗಳಲ್ಲಿ ಕುಡುಕ ಗಂಡಂದಿರ ಕಾಟ ತುಸು ಹೆಚ್ಚು. ಹೀಗಾಗಿ ಅಕ್ಷಯ ತೃತೀಯಾದ ಅಂಗವಾಗಿ ಬಡ ಮತ್ತು ಹಿಂದುಳಿದ ಸಮುದಾಯಗಳಿಗೆಂದೇ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಸಚಿವ ಗೋಪಾಲ್ ಅವರು ಮಹಿಳೆಯರಿಗೆ ಈ ವಿಶೇಷ ಉಡುಗೊರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
MUST WATCH
ಹೊಸ ಸೇರ್ಪಡೆ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ