ಕಪ್ಪು ಹಣ ವಿವರ ನೀಡಿ,5 ಕೋಟಿ ರೂ.ಗೆಲ್ಲಿ !
Team Udayavani, Jun 2, 2018, 8:36 AM IST
ಹೊಸದಿಲ್ಲಿ: ಬೇನಾಮಿ ಆಸ್ತಿ, ಕಪ್ಪು ಹಣ ವಿವರ ನೀಡಿದರೆ ಜನಸಾಮಾನ್ಯನೂ ಕೋಟ್ಯಧಿಪತಿ ಆಗಬಹುದು! ಇದು ಸುಳ್ಳಲ್ಲ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊಸ ಯೋಜನೆ ಘೋಷಿಸಿದೆ. ಬೇನಾಮಿ ಆಸ್ತಿ ವಿವರ ನೀಡಿ ದವರಿಗೆ 1 ಕೋ. ರೂ., ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಮಾಹಿತಿ ನೀಡಿದವರಿಗೆ 5 ಕೋ. ರೂ. ಬಹುಮಾನ ನೀಡುವುದಾಗಿ ಹೇಳಿದೆ.
ಅಷ್ಟೇ ಅಲ್ಲ, ಆದಾಯ ಮತ್ತು ಸ್ವತ್ತುಗಳ ಮಾಹಿತಿಯನ್ನು ಇಲಾಖೆಗೆ ತಪ್ಪಾಗಿ ನೀಡಿದವರ ಬಗ್ಗೆ ನಿಖರ ವಿವರ ನೀಡಿದರೂ 50 ಲಕ್ಷ ರೂ.ಗಳವರೆಗೆ ಬಹುಮಾನ ನೀಡಲಾಗುತ್ತದೆ. ಈ ಸಂಬಂಧ ಪ್ರಸ್ತುತ ಆದಾಯ ತೆರಿಗೆ ಮಾಹಿತಿದಾರರ ಬಹುಮಾನ ಯೋಜನೆಯ ನೀತಿಗಳನ್ನು ಬದಲಿಸಲಾಗಿದೆ.
ಬಹುಮಾನ ಸಿಗೋದು ಹೇಗೆ?
ಬೇನಾಮಿ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದಾಗ ಮಧ್ಯಾಂತರ ಬಹುಮಾನ ನೀಡಲಾಗುತ್ತದೆ. ಅಂತಿಮವಾಗಿ ಸ್ವತ್ತನ್ನು ವಶಪಡಿಸಿಕೊಂಡಾಗ ಒಟ್ಟು ಬಹುಮಾನ ಸಿಗುತ್ತದೆ. ಜಪ್ತಿ ಮಾಡಿದ 4 ತಿಂಗಳೊಳಗೆ ಸ್ವತ್ತಿನ ಶೇ.1ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ. ಅನ್ನು ಮಧ್ಯಾಂತರವಾಗಿ ನೀಡಲಾಗುತ್ತದೆ. ಎರಡು ವರ್ಷದೊಳಗೆ ಯಾವುದೇ ಪ್ರಕರಣ ಈ ಸಂಬಂಧ ಬಾಕಿ ಇಲ್ಲದಿದ್ದರೆ ಪ್ರಕರಣ ಅಂತಿಮ ಎಂದು ಪರಿಗಣಿಸಿ, ಬಹುಮಾನದ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಆದರೆ ಜಪ್ತಿ ಮಾಡಿದ ಸ್ವತ್ತಿನ ಶೇ.5ರಷ್ಟು ಅಥವಾ ಗರಿಷ್ಠ 1 ಕೋಟಿ ರೂ. ಮಾತ್ರ ಬಹುಮಾನ ಸಿಗಲಿದೆ.
ವಿದೇಶಿಯರೂ ಸಹಿತ ಯಾವುದೇ ವ್ಯಕ್ತಿಯು ಜಂಟಿ ಅಥವಾ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರಿಗೆ ಮಾಹಿತಿ ನೀಡಬಹುದಾಗಿದೆ. ಆದರೆ ಮಾಹಿತಿ ನೀಡಿದ ವ್ಯಕ್ತಿಯ ಯಾವ ವಿವರಗಳನ್ನು ವ್ಯಕ್ತಿಯ ಭದ್ರತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಬಹಿರಂಗಗೊಳಿಸಲಾಗುವುದಿಲ್ಲ. ಬೇನಾಮಿ ಸ್ವತ್ತುಗಳ ಬಹಿರಂಗಗೊಳಿಸುವಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಯೋಜನೆ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು