ಟ್ರಾಫಿಕ್ಗೆ ವಿಶ್ವದಲ್ಲಿ ಬೆಂಗ್ಳೂರೇ ನಂ.1
Team Udayavani, Jan 30, 2020, 3:07 AM IST
ನವದೆಹಲಿ: ಉದ್ಯಾನ ನಗರಿ, ಐಟಿ ಹಬ್ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ವಿಶ್ವ ದಲ್ಲೇ ಅತಿ ಹೆಚ್ಚು ಟ್ರಾಫಿಕ್ ಜಾಮ್ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಮುಂಚೂಣಿ ವಾಹನ ಯಾನ ಸಂಸ್ಥೆಯಾದ ಟೋಮ್ ಟೋಮ್, ಟ್ರಾಫಿಕ್ ಜಾಮ್ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಿಶ್ವದ 57 ದೇಶಗಳ 416 ನಗರದಲ್ಲಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಭಾರತದ 4 ಪ್ರಮುಖ ನಗರಗಳು ಟಾಪ್ಟೆನ್ ಪಟ್ಟಿಯಲಿವೆ. ಟ್ರಾಫಿಕ್ ಜಾಮ್ನಿಂದ ಭಾರತ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದು, ಶೇ.71ರಷ್ಟು ಟ್ರಾಫಿಕ್ ಜಾಮ್ ಹೊಂದಿದೆ. ಇದು ವಿಶ್ವದಲ್ಲೇ ಅತಿ ಜನದಟ್ಟಣೆ ಕೂಡಿರುವ ನಗರವಾಗಿದೆ.
2019ರ ಆಗಸ್ಟ್ 20 ಮಂಗಳವಾರ ಅತಿ ಹೆಚ್ಚು ಟ್ರಾಫಿಕ್ ಜಾಮ್ನಿಂದ (ಶೇ.103)ಕೂಡಿರುವ ದಿನವಾಗಿದೆ. 2019ರ ಏಪ್ರಿಲ್ 6 ಶನಿವಾರ (ಶೇ.30) ಅತ್ಯುತ್ತಮ ದಿನವಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ಬಳಿಕ ಸಂಚರಿಸಿದರೆ ವರ್ಷಕ್ಕೆ ಐದು ಗಂಟೆಯನ್ನು ಉಳಿಸಬಹುದಾಗಿದೆ. ಟ್ರಾಫಿಕ್ ಜಾಮ್ನಿಂದ ವರ್ಷಕ್ಕೆ ಸರಾಸರಿ 243 ಗಂಟೆಗಳು (10 ದಿನ, 3 ಗಂಟೆ) ವ್ಯರ್ಥವಾ ಗಲಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ನಂತರ ಫಿಲಿಪ್ಪಿನ್ಸ್ ಮನಿಲಾ ನಗರ (ಶೇ. 71 ಟ್ರಾಫಿಕ್ ಜಾಮ್) 2ನೇ ಸ್ಥಾನದಲ್ಲಿದೆ. ಕೊಲಂಬಿಯಾದ ಬೊಗೊಟಾ ನಗರ (ಶೇ.68) 3ನೇ ಸ್ಥಾನದಲ್ಲಿದೆ. ಇನ್ನು ಭಾರತದ ಮುಂಬೈ (ಶೇ.65) 4ನೇ ಸ್ಥಾನ, ಪುಣೆ (ಶೇ.59) 5ನೇ ಸ್ಥಾನ ಹಾಗೂ ನವದೆಹಲಿ (ಶೇ.56) 8ನೇ ಸ್ಥಾನದಲ್ಲಿದೆ. ರಷ್ಯಾದ ಮಾಸ್ಕೋ, ಪೆರು ದೇಶದ ಲಿಮಾ, ಟರ್ಕಿಯ ಇಸ್ತಾನಬುಲ್ ಹಾಗೂ ಇಂಡೋನೇಷ್ಯಾದ ಜಕರ್ತಾ ಟಾಪ್ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ವಿಶೇಷ ಎಂದರೆ, ಭಾರತದ ಪ್ರಮುಖ ನಗರಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಇದ್ದರೂ ಮೆಟ್ರೋ ಸೇರಿದಂತೆ ರಸ್ತೆಗಳು ಅತ್ಯುತ್ತಮವಾಗಿವೆ. ಅತಿ ಹೆಚ್ಚು ಟ್ರಾಫಿಕ್ ಜಾಮ್, ಅತಿ ಕಡಿಮೆ ಟ್ರಾಫಿಕ್ ಜಾಮ್, ರಸ್ತೆಯಲ್ಲಿ ಚಾಲಕ ಎಷ್ಟು ಸಮಯ ಕಾಲ ಕಾಯುತ್ತಾನೆ, ರಸ್ತೆ ಸಂಪರ್ಕ ಜಾಲ ಮತ್ತಿತರ ಅಂಶಗಳನ್ನಿಟ್ಟುಕೊಂಡು ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.
ಟಾಪ್ ಟೆನ್ ನಗರಗಳು, ಟ್ರಾಫಿಕ್ ಜಾಮ್ ಪ್ರಮಾಣ
1.ಬೆಂಗಳೂರು(ಭಾರತ)- ಶೇ.71
2.ಮನಿಲಾ(ಫಿಲಿಪ್ಪಿನ್)-ಶೇ.71
3.ಬೊಗೊಟಾ(ಕೊಲೊಂಬಿಯಾ)-ಶೇ.68
4.ಮುಂಬೈ (ಭಾರತ)-ಶೇ.65
5.ಪುಣೆ (ಭಾರತ)-ಶೇ.59
6.ಮಾಸ್ಕೋ (ರಷ್ಯಾ)-ಶೇ.59
7.ಲಿಮಾ (ಪೆರು)-ಶೇ.57
8.ನವದೆಹಲಿ(ಭಾರತ)-ಶೇ.56
9.ಇಸ್ತಾನಬುಲ್(ಟರ್ಕಿ)-ಶೇ.55
10.ಜಕಾರ್ತ (ಇಂಡೋನೇಷ್ಯಾ)-ಶೇ.53
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ