ಬಾಂಗ್ಲಾ ಪಡೆ ನಡೆಸಿದ್ದು ಅಪ್ರಚೋದಿತ ದಾಳಿ
Team Udayavani, Oct 19, 2019, 5:24 AM IST
ಹೊಸದಿಲ್ಲಿ: ಮೀನುಗಾರರ ಬಿಡುಗಡೆ ವಿಚಾರದಲ್ಲಿ ಬಿಎಸ್ಎಫ್ ಮತ್ತು ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್ (ಬಿಜಿಪಿ) ಮಧ್ಯೆ ನಡೆದ ಉದ್ವಿಗ್ನ ಸ್ಥಿತಿ ಕುರಿತು ಬಿಎಸ್ಎಫ್ ಶುಕ್ರವಾರ ವಿವರಣೆ ನೀಡಿದ್ದು, ಬಿಜಿಬಿ ಅಪ್ರಚೋದಿತ ದಾಳಿ ನಡೆಸಿದೆ ಎಂದಿದೆ. ಗುರುವಾರ ನಡೆದಿದ್ದ ಈ ಘಟನೆ ಯಲ್ಲಿ ಓರ್ವ ಬಿಎಸ್ಎಫ್ ಯೋಧ ಸಾವನ್ನಪ್ಪಿ, ಮತ್ತೂಬ್ಬ ಯೋಧ ಗಾಯಗೊಂಡಿದ್ದರು.
ಎರಡೂ ದೇಶದ ಯೋಧರ ಮಧ್ಯೆ ಸಭೆ ನಡೆಯುವ ವೇಳೆ ಬಿಎಸ್ಎಫ್ ಒಂದೇ ಒಂದು ಗುಂಡನ್ನೂ ಹಾರಿಸಿಲ್ಲ ಎಂದು ಬಿಎಸ್ಎಫ್ ಹೇಳಿದೆ. ಬಿಎಸ್ಎಫ್ ಗುಂಡಿನ ದಾಳಿ ನಡೆಸಿದ್ದ ರಿಂದ ಸ್ವಯಂರಕ್ಷಣೆಗಾಗಿ ನಾವು ದಾಳಿ ನಡೆಸ ಬೇಕಾಯಿತು ಎಂದು ಬಿಜಿಬಿ ಗುರುವಾರ ಹೇಳಿತ್ತು. ಮೀನುಗಾರರನ್ನು ಬಿಡಿಸಿ ಕೊಳ್ಳುವುದಕ್ಕಾಗಿ ಬಿಎಸ್ಎಫ್ ಅಕ್ರಮವಾಗಿ ಬಾಂಗಾ ಗಡಿ ನುಸುಳಿತ್ತು. ಹೀಗಾಗಿ ನಾವು ಫ್ಲ್ಯಾಗ್ ಮೀಟಿಂಗ್ನಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇವೆ ಎಂದೆವು. ಆದರೆ ಬಿಎಸ್ಎಫ್ ಯೋಧರು ಉದ್ವಿಗ್ನರಾಗಿ ವಾಪಸಾಗಲು ಆರಂಭಿಸಿದರು. ಈ ವೇಳೆ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಬಿಜಿಬಿ ಹೇಳಿಕೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!