ಭೀಮಾ ಕೋರೇಗಾಂವ್: ಮುಗಿದ ಗೃಹ ಬಂಧನ; ಅರುಣ್, ವೆರ್ನನ್ ಅರೆಸ್ಟ್
Team Udayavani, Oct 26, 2018, 7:36 PM IST
ಮುಂಬಯಿ : ಭೀಮಾ ಕೋರೇಗಾಂವ್ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆ.28ರಿಂದ ಗೃಹ ಬಂಧನದಲ್ಲಿ ಇರುವ ಮಾನವ ಹಕ್ಕು ಕಾರ್ಯಕರ್ತರಾದ ಅರುಣ್ ಮತ್ತು ವೆರ್ನನ್ ಅವರನ್ನು ಪುಣೆ ಪೊಲೀಸರು ಇಂದು ಶುಕ್ರವಾರ ಬಂಧಿಸಿದರು.
ಪುಣೆ ಸೆಶನ್ಸ್ ಕೋರ್ಟ್ ಇಂದು ಶುಕ್ರವಾರ ಮೂವರು ಮಾನವ ಹಕ್ಕು ಕಾರ್ಯಕರ್ತರಾದ ಅರುಣ್ ಫೆರೀರಾ, ಸುಧಾ ಭಾರದ್ವಾಜ್ ಮತ್ತು ವೆರ್ನನ್ ಗೊನ್ಸಾಲ್ವಿಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಬಾಂಬೆ ಹೈಕೋರ್ಟ್ ಅರುಣ್ ಮತ್ತು ವೆರ್ನನ್ ಅವರ ಗೃಹ ಬಂಧನವನ್ನು ವಿಸ್ತರಿಸಲು ನಿರಾಕರಿಸಿದುದನ್ನು ಅನುಸರಿಸಿ ಪುಣೆ ಪೊಲೀಸರು ವೆರ್ನನ್ ಅವರನ್ನು ಮುಂಬಯಿಯಲ್ಲೂ ಅರುಣ್ ಅವರನ್ನು ಮಹಾರಾಷ್ಟ್ರದ ಥಾಣೆಯಲ್ಲೂ ಬಂಧಿಸಿದರು.
ಡಿಫೆನ್ಸ್ ವಕೀಲರು ಪುಣೆಯ ಸೆಶನ್ಸ್ ಕೋರ್ಟ್ ನಲ್ಲಿ ಗೊನ್ಸಾಲ್ವಿಸ್ ಮತ್ತು ಫೆರೀರಾ ಅವರ ಗೃಹ ಬಂಧನದ ಅವಧಿಯನ್ನು ಇನ್ನೂ ಏಳು ದಿನಗಳಿಗೆ ವಿಸ್ತರಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಗೃಹ ಬಂಧನದ ಅವಧಿ ಇಂದಿಗೆ ಮುಗಿದಿತ್ತು. ಈ ವಿದ್ಯಮಾನವನ್ನು ಅನುಸರಿಸಿ ಪೊಲೀಸರು ಗೊನ್ಸಾಲ್ವಿಸ್ ಮತ್ತು ಫೆರೀರಾ ಅವರನ್ನು ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್