ಬಿಹಾರ ನಿತೀಶ್ ಸಂಪುಟ ವಿಸ್ತರಣೆ ; 8 ಜೆಡಿಯು ನಾಯಕರಿಗೆ ಅವಕಾಶ
ಬಿಜೆಪಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ನಿತೀಶ್
Team Udayavani, Jun 2, 2019, 3:16 PM IST
ಪಾಟ್ನಾ: ಬಿಹಾರದ ಎನ್ಡಿಎ ಸರ್ಕಾರದ ಸಂಪುಟ ವಿಸ್ತರಣೆ ಭಾನುವಾರ ನಡೆದಿದ್ದು, 8 ಮಂದಿ ಜೆಡಿಯು ನಾಯಕರು ನಿತೀಶ್ ಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಅಶೋಕ್ ಚೌಧರಿ, ಶ್ಯಾಮ್ ರಾಜಾಕ್, ಎಲ್ ಪ್ರಸಾದ್ , ಭೀಮಾ ಭಾರತಿ , ರಾಮ್ ಸೇವಕ್ ಸಿಂಗ್, ಸಂಜಯ್ ಝಾ, ನೀರಜ್ ಕುಮಾರ್ ಮತ್ತು ನರೇಂದ್ರ ನಾರಾಯಣ ಯಾದವ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶ್ಯಾಮ್ ರಜಾಕ್ ಅವರು ಆರ್ಜೆಡಿ ತೊರೆದು ವರ್ಷದ ಹಿಂದೆ ಜೆಡಿಯು ಸೇರ್ಪಡೆಯಾಗಿದ್ದರು.
ಅಶೋಕ್ ಚೌಧರಿ ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್-ಆರ್ಜೆಡಿ-ಜೆಡಿಯು ಸರ್ಕಾರವಿದ್ದಾಗ ಸಚಿವರಾಗಿದ್ದರು. ಆ ಬಳಿಕ ಜೆಡಿಯು ಸೇರ್ಪಡೆಯಾಗಿದ್ದರು.
ಸಂಪುಟ ವಿಸ್ತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ , ಜೆಡಿಯು ಕೋಟಾದಲ್ಲಿ ಖಾಲಿ ಇದ್ದ ಸಚಿವ ಸ್ಥಾನಗಳನ್ನು ತುಂಬಿಸಿದ್ದೇವೆ. ಯಾವುದೇ ಗೊಂದಲವಿಲ್ಲ. ಬಿಜೆಪಿ ಬಿಹಾರದಲ್ಲಿ ಸರ್ಕಾರದ ಭಾಗವಾಗಿ ಇರಲಿದೆಎಂದರು.
ಮೋದಿ ಸಂಪುಟದಲ್ಲಿ ಎನ್ಡಿಎ ಮಿತ್ರಪಕ್ಷವಾದ ಹೊರತಾಗಿಯೂ ಜೆಡಿಯು ಸಂಸದರು ಯಾರೂ ಸಚಿವ ಸ್ಥಾನ ಪಡೆದಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
MUST WATCH
ಹೊಸ ಸೇರ್ಪಡೆ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು