ಕಾಂಗ್ರೆಸ್-ಆರ್ಜೆಡಿ ಟೆನ್ಶನ್ ಶಮನ: ಬಿಹಾರ ಮಹಾಘಟಬಂಧನ ಸುಸ್ಥಿತಿಯಲ್ಲಿ
Team Udayavani, Mar 28, 2019, 4:03 PM IST
ಪಟ್ನಾ : ದರ್ಭಾಂಗ ಸೀಟಿಗೆ ಸಂಬಂಧಪಟ್ಟು ಬಿಹಾರ ಮಹಾ ಘಟಬಂಧನದಲ್ಲಿ (ಮೈತ್ರಿಕೂಟದಲ್ಲಿ) ಬಿರುಕುಂಟಾಗಿರುವ ಶಂಕೆಯನ್ನು ಮೂಲಗಳು ವ್ಯಕ್ತಪಡಿಸಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಆ ಬಗೆಯ ಎಲ್ಲ ವದಂತಿಗಳನ್ನು ಸಾರಾಸಗಟು ತಳ್ಳಿಹಾಕಿದ್ದಾರೆ.
‘ಸೀಟು ಹಂಚಿಕೆ ಒಗಟನ್ನು ಸಂಪೂರ್ಣವಾಗಿ ಬಗೆಹರಿಸಲಾಗಿದೆ. ಶೀಘ್ರವೇ ಸೀಟು ಹಂಚಿಕೆ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ; ಬಿಹಾರ ಮಹಾ ಘಟಬಂಧನ ಸುಸ್ಥಿತಿಯಲ್ಲಿದ್ದು ಅದು ಹಾಗೆಯೇ ಮುಂದುವರಿಯುತ್ತದೆ’ ಎಂದು ಕಾಂಗ್ರೆಸ್ ನಾಯಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇಂದು ಗುರುವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹಲ್ ಗಾಂಧಿ ಅವರು ಬಿಹಾರ ಪಕ್ಷದ ಘಟಕದ ಸದಸ್ಯರೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ನಿವಾರಿಸಿದ್ದರು ಎಂದು ಮೂಲಗಳು ಹೇಳಿವೆ.