ನಾಲ್ಕು ರಾಜ್ಯದಲ್ಲಿ, ಆರು ಮಹಿಳೆಯರನ್ನು ಮದುವೆಯಾದ ಭೂಪ: ಸಿಕ್ಕಿ ಬಿದ್ದದ್ದು ಹೇಗೆ..?
Team Udayavani, Nov 30, 2022, 1:15 PM IST
ಬಿಹಾರ: ಒಬ್ಬರನ್ನು ಮದುವೆಯಾಗಿ ಸಂಸಾರ ಸಾಗಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ .. ಒಬ್ಬರನ್ನಲ್ಲ, ಎಷ್ಟು ಜನರನ್ನು ಮದುವೆಯಾಗಿದ್ದಾನೆ. ಅಂದರೆ.. ಬಿಹಾರದ ಜವತಾರಿ ಗ್ರಾಮದ ಛೋಟು ಕುಮಾರ್ ಎಂಬ ವ್ಯಕ್ತಿ ನಾಲ್ಕು ರಾಜ್ಯದಲ್ಲಿ ಒಟ್ಟು ಆರು ಮಹಿಳೆಯರನ್ನು ಮದುವೆಯಾಗಿ ಸಿಕ್ಕಿ ಬಿದ್ದಿದ್ದಾನೆ.
ಸಿಕ್ಕಿ ಬಿದ್ದದ್ದು ಹೇಗೆ?: ನ.28 ರಂದು (ಸೋಮವಾರ) ಛೋಟು ಕುಮಾರ್ ಜಮುಯಿ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಜೊತೆ ನಿಂತಿರುವುದನ್ನು ಛೋಟು ಕುಮಾರ್ ಅವರ ಹಿಂದಿನ ಪತ್ನಿ ಮಂಜು ಅವರ ತಮ್ಮ ಅಂದರೆ ಮೈದುನ ವಿಕಾಸ್ ಎನ್ನುವವರು ಗಮನಿಸಿದ್ದು, ವಿಕಾಸ್ ಕೋಲ್ಕತ್ತಾಕ್ಕೆ ಹೋಗಲು ಅಲ್ಲಿಗೆ ಬಂದಿದ್ದರು. ಆಗ ಛೋಟು ಅವರನ್ನು ನೋಡಿ ಕುಟುಂಬದವರಿಗೆ ಮಾಹಿತಿ ನೀಡುತ್ತಾರೆ.
ಪೊಲೀಸರು ಛೋಟುವನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತರುತ್ತಾರೆ. ಅಲ್ಲಿ ಆತ ತಾನು ಆರು ಮಹಿಳೆಯರನ್ನು, ನಾಲ್ಕು ರಾಜ್ಯದಲ್ಲಿ ಮದುವೆಯಾಗಿದ್ದೇನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಛೋಟು ಮಂಜು ಅವರನ್ನು 2018 ರಲ್ಲಿ ಮದುವೆಯಾಗಿದ್ದಾನೆ. ನನ್ನ ಮಗಳಿಗೆ ಇಬ್ಬರು ಮಕ್ಕಳಿವೆ. ಒಂದೂವರೆ ವರ್ಷದ ಹಿಂದೆ ಔಷಧಿ ತರಲೆಂದು ಹೊರಗೆ ಹೋಗಿದ್ದಾನೆ. ಆ ದಿನದಿಂದ ಆತ ಮತ್ತೆಂದೂ ಮನೆಗೆ ವಾಪಸ್ ಬರಲಿಲ್ಲ. ಛೋಟು ರಾಂಚಿಯಲ್ಲಿ ಕಲಾವತಿ ದೇವಿ ಎನ್ನುವವಳನ್ನು ಮದುವೆಯಾಗಿದ್ದಾನೆ. ಆಕೆಗೆ ನಾಲ್ಕು ಮಕ್ಕಳಿದ್ದಾರೆ ಎಂದು ಮಂಜು ಅವರ ತಾಯಿ ಕೋಬಿಯಾ ದೇವಿ ಪೊಲೀಸರಿಗೆ ಹೇಳಿದ್ದಾರೆ.
ನನ್ನ ತಂಗಿ ಛೋಟುಗಾಗಿ ತುಂಬಾ ದಿನ ಕಾದಿದ್ದಾರೆ. ಆದರೆ ಅವರು ಮರಳಿ ಬರಲಿಲ್ಲವೆಂದು ಪೊಲೀಸರಿಗೆ ವಿಕಾಸ್ ಹೇಳಿದ್ದಾರೆ. ಛೋಟು ಎರಡನೇ ಪತ್ನಿಯ ಮನೆಯವರು ಆತನ ಮೇಲೆ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಾದರೆ ಪೊಲೀಸರು ತನಿಖೆ ಮಾಡುತ್ತಾರೆ ಎಂದು ವರದಿ ತಿಳಿಸಿದೆ.
ಛೋಟು ಕುಮಾರ್ ಆರ್ಕೆಸ್ಟ್ರಾ ತಂಡವೊಂದರಲ್ಲಿ ಗಾಯಕನಾಗಿದ್ದು, ಬೇರೆ ಬೇರೆ ಕಡೆ ಗಾಯನ ಮಾಡಿ, ಅಲ್ಲಿ ಆತನ ಮದುವೆಯಾಗುತ್ತಿದ್ದ, ಒಬ್ಬರನ್ನು ಮದುವೆಯಾಗುವ ಮುನ್ನ ಅವರನ್ನು ಬಳಸಿ, ಮೋಸ ಮಾಡುತ್ತಿದ್ದ ಎಂದು ವಿಕಾಸ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR
ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ಸಿಆರ್ ಪಿಎಫ್ ಜವಾನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
10 ವರ್ಷದಲ್ಲಿ ಸಂಸದರ ಆಸ್ತಿ ಶೇ.71 ಏರಿಕೆ
ಅಮೆರಿಕದಿಂದ ಐ ಡ್ರಾಪ್ಸ್ಗಳನ್ನು ವಾಪಸ್ ಪಡೆದ ಭಾರತೀಯ ಕಂಪನಿ
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR
ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ಸಿಆರ್ ಪಿಎಫ್ ಜವಾನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಅಡೆತಡೆಗಳ ದಾಟಿ ಗೆದ್ದ ‘ತನುಜಾ’
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
ದೇಶದ ಮೊದಲ ಪ್ರಕರಣ: ಮಗುವಿನ ನಿರೀಕ್ಷೆಯಲ್ಲಿ ತೃತೀಯ ಲಿಂಗಿ ದಂಪತಿ