ಪಟ್ನಾ ನಿವಾಸದಲ್ಲಿ ನಿವೃತ್ತ ಕಮಿಷನರ್,ಪತ್ನಿ ಕೊಲೆ;ನಾಲ್ವರು ವಶಕ್ಕೆ
Team Udayavani, Sep 7, 2018, 10:52 AM IST
ಪಟ್ನಾ : ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ, 82ರ ಹರೆಯದ ಹರೇಂದ್ರ ಪ್ರಸಾದ್ ಮತ್ತು ಅವರ ಪತ್ನಿ ಸಾಧನಾ ದಾಸ್ ಗುಪ್ತಾ ಅವರು ನಗರದ ಬುದ್ಧ ಕಾಲಿನಿಯಲ್ಲಿನ ತಮ್ಮ ನಿವಾಸದ ಡ್ರಾಯಿಂಗ್ ರೂಮಲ್ಲಿ ನಿಗೂಢ ಸನ್ನಿವೇಶದಲ್ಲಿ ಸತ್ತು ಬಿದ್ದಿರುವುದು ನಿನ್ನೆ ಗುರುವಾರ ತಡರಾತ್ರಿ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಇದು ಶಂಕಿತ ಕೊಲೆಯಂತೆ ಕಂಡು ಬರುತ್ತಿದೆ; ಎರಡೂ ಮೃತ ದೇಹಗಳ ಮೇಲೆ ಗಾಯಗಳು ಕಂಡುಬಂದಿವೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಚಾಲಕ ಮತ್ತು ಮನೆ ಕೆಲಸದಾಕೆ ಸೇರಿದ್ದಾರೆ ಎಂದು ಎಸ್ಎಸ್ಪಿ ಮನು ಮಹಾರಾಜ್ ಹೇಳಿದ್ದಾರೆ.
ಮನೆಯ ಡ್ರಾಯಿಂಗ್ ರೂಮಲ್ಲಿ ಬಿದ್ದಿದ್ದ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾದಾಗ ವೈದ್ಯರು ಅದಾಗಲೇ ಸಾವು ಸಂಭವಿಸಿದ್ದಾಗಿ ಹೇಳಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಿಗೂಢತೆಯನ್ನು ತಾವು ಬೇಗನೆ ಭೇದಿಸುವುದಾಗಿ ಪೊಲಿಸರು ಹೇಳಿದ್ದಾರೆ.
ಸಂಬಂಧಿಕರನ್ನು ಕೂಡ ಪ್ರಶ್ನಿಸಲಾಗುತ್ತಿದ್ದು ಕೇಸಿನ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಈ ಅವಳಿ ಸಾವು ಕಾಲನಿಯ ನಿವಾಸಿಗಳಲ್ಲಿ ಭಯ, ಆತಂಕ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್