ಕೇಜ್ರಿ ವಿರುದ್ಧದ ಮೊಕದ್ದಮೆ ಸಮಾಪ್ತಿ
Team Udayavani, Apr 4, 2018, 9:15 AM IST
ಹೊಸದಿಲ್ಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ನಡುವಿನ ಕಾನೂನು ಸಮರ ಅಂತ್ಯಗೊಂಡಿದೆ. ಕೇಜ್ರಿವಾಲ್ ಮತ್ತು ಇತರೆ ಆಪ್ ನಾಯಕರು ಜೇಟ್ಲಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಇತ್ಯರ್ಥಗೊಳಿಸಿದೆ.