ಕಾಂಗ್ರೆಸ್ ಖಾಸಗಿ ಆಸ್ತಿಯಾಗಿಬಿಟ್ಟಿದೆ, ಮುಂದಿನ ದಿನಗಳಲ್ಲಿ ವಿಪಕ್ಷ ಸ್ಥಾನವೂ ಕಷ್ಟ:ಖುಷ್ಬೂ
Team Udayavani, Oct 15, 2020, 8:20 AM IST
ಚೆನ್ನೈ: “ಸ್ಟಾರ್’ ರಾಜಕಾರಣಿ ಖುಷ್ಬೂ ಸುಂದರ್ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚರ್ಚೆಯಲ್ಲಿದ್ದಾರೆ. ಡಿಎಂಕೆಯಿಂದ ಕಾಂಗ್ರೆಸ್ ಮನೆ ಸೇರಿದ್ದ ಖುಷ್ಬೂ, ಸೈದ್ಧಾಂತಿಕ ಚಿಂತನೆಗಳೊಂದಿಗೆ ದಿಢೀರನೆ ರಾಜಕೀಯ ಪಥ ಬದಲಿಸಿದ್ದಾರೆ. ಖುಷ್ಬೂ ತಮ್ಮ ನಿಲುವಿನ ಕುರಿತು “ಇಂಡಿಯನ್ ಎಕ್ಸ್ಪ್ರೆಸ್’ ಜತೆಗಿನ ಸಂದರ್ಶನದಲ್ಲಿ ಕೆಲವು ಅನಿಸಿಕೆ ಹಂಚಿಕೊಂಡಿದ್ದಾರೆ…
* ಗಾಂಧಿ ಕುಟುಂಬ ತಾವೇ ನಿರ್ಮಿಸಿಕೊಂಡ ಗುಳ್ಳೆಯಿಂದ ಹೊರಬರಬೇಕು. ಎಲ್ಲಿಯತನಕ ಆ ಗುಳ್ಳೆ ಒಡೆಯುವುದಿಲ್ಲವೊ, ಅಲ್ಲಿಯವರೆಗೆ ಅವರು ಸೋಲುತ್ತಲೇ ಇರುತ್ತಾರೆ.
*ದೇಶ ಆಳುವ ಆಲೋಚನೆ ಬಿಟ್ಟು, ಅವರು ಸದಾ ವಿಪಕ್ಷ ಸ್ಥಾನದಲ್ಲಿರುವುದಾಗಿ ಹುಸಿ ನಂಬಿಕೆಯಿಂದ ಬದುಕುತ್ತಿದ್ದಾರೆ. ಆದರೆ ಕಾಲಕ್ರಮೇಣ ಕಾಂಗ್ರೆಸ್ಗೆ ವಿಪಕ್ಷದಲ್ಲೂ ಸ್ಥಾನ ಸಿಗುವುದು ಅನುಮಾನ.
*ಕಾಂಗ್ರೆಸ್ನ ಭಾಗವಾಗಿದ್ದವರು, ಪಕ್ಷನಿಷ್ಠರು ಏಕೆ ಇಂದು ಪಕ್ಷ ತೊರೆಯುತ್ತಿದ್ದಾರೆ? ಈ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಲೇ ಇಲ್ಲ. ಪಕ್ಷದ ದೋಷಗಳನ್ನುಕಾಂಗ್ರೆಸ್ ಸಂತೋಷದಿಂದ ಅವಗಣಿಸುತ್ತಿದೆ.
ಇದನ್ನೂ ಓದಿ:ಅಸ್ತಿತ್ವಕ್ಕಾಗಿ ಕಾಶ್ಮೀರಿ ನಾಯಕರ ಪ್ರಯತ್ನ; ದಾಳವಾಗಿ ಬದಲಾಗದಿರಲಿ
*ನಾನು ಬಿಜೆಪಿಗೆ ಹೋದ್ರೆ ನಿಮ್ಮ ಕಣ್ಣಿಗೆ ಅವಕಾಶವಾದಿ. ಆದರೆ, ಕಾಂಗ್ರೆಸ್ನ ಭಾಗವೇ ಆಗಿರುವ 23 ನಾಯಕರು ಪಕ್ಷದ ನಾಯಕತ್ವ ವಿರುದ್ಧ ಭಿನ್ನಸ್ವರ ಎತ್ತಿದ್ದಾಗ ನೀವೇಕೆ ಅವರನ್ನು ಏನೂ ಕೇಳಿಲ್ಲ?
*ಕಾಂಗ್ರೆಸ್ಸನ್ನು ಕಟ್ಟಿದ್ದು ಜನತೆಗಾಗಿ. ಅದು ಖಾಸಗಿ ಆಸ್ತಿಯಲ್ಲ. ದೇಶಕ್ಕಾಗಿ ಸೇವೆಗೈದವರು ಆ ಪಕ್ಷ ಕಟ್ಟಿದರು. ಈ ಮೂಲ ಸತ್ಯವನ್ನು ಪಕ್ಷ ಮರೆತಿದೆ.
*ಬಿಜೆಪಿ ವಿರುದ್ಧ ನಾನು ಈ ಹಿಂದೆ ಮಾತನಾಡಿದ್ದೆ ನಿಜ. ಈಗ ಅದು ಪ್ರಸ್ತುತವಲ್ಲ. ನಾನು ಎಂಥ ವ್ಯಕ್ತಿ, ಯಾವ ರೀತಿಯ ಆಲೋಚನೆ ಹೊಂದಿದ್ದೇನೆ ಎಂದು ಬಿಜೆಪಿಗೆ ಗೊತ್ತು. ಪಕ್ಷ ಕೊಡುವ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುವೆನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ